ADVERTISEMENT

21 ದಿನ: ಮಹತ್ವ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 18:55 IST
Last Updated 27 ಮಾರ್ಚ್ 2020, 18:55 IST
ವ್ಯಂಗ್ಯ ಚಿತ್ರ
ವ್ಯಂಗ್ಯ ಚಿತ್ರ   

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇಂದು ಕೊರೊನಾ ಹಿನ್ನೆಲೆಯಲ್ಲಿ ದೇಶದ ಜನರ ಒಳಿತಿಗಾಗಿ ಕೇಂದ್ರ ಸರ್ಕಾರ 21 ದಿನಗಳ ದಿಗ್ಬಂಧನ ವಿಧಿಸಿದೆ. ಅದನ್ನು ಲಕ್ಷಿಸದ ಕೆಲವರು ಗುಂಪು ಗುಂಪಾಗಿ ಸೇರಿ ಕೊರೊನಾ ವೈರಸ್‌ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ.

ನಮ್ಮ ಸೈನಿಕರು ಕೆಲವೊಮ್ಮೆ ಕೆಲ ದಿನಗಳ ಕಾಲ ನೀರು, ಆಹಾರದ ಬಗ್ಗೆ ಯೋಚಿಸದೆ ದೇಶದ ರಕ್ಷಣೆ ಮಾಡುವುದನ್ನು ನೆನಪು ಮಾಡಿಕೊಳ್ಳೋಣ. ಅನವಶ್ಯಕವಾಗಿ ಮನೆಯಿಂದ ಹೊರಬರದೆ, 21 ದಿನಗಳ ದಿಗ್ಬಂಧನ ಯಶಸ್ವಿಗೊಳಿಸೋಣ.

ಸಿ.ಸಿದ್ದರಾಜು ಆಲಕೆರೆ,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.