ADVERTISEMENT

ಸಂವಿಧಾನಾತ್ಮಕ ಸಂಸ್ಥೆ ಮಾದರಿಯಾಗಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಏಪ್ರಿಲ್ 2021, 20:32 IST
Last Updated 12 ಏಪ್ರಿಲ್ 2021, 20:32 IST

ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪಾತಾಳಕ್ಕೆ ಇಳಿದಿರುವ ಕುರಿತ ಸಂಪಾದಕೀಯ (ಪ್ರ.ವಾ., ಏ. 10), ಆಯೋಗದ ನಡವಳಿಕೆ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ. ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಡಬೇಕಾದದ್ದು ಆಯೋಗದ ಆದ್ಯ ಕರ್ತವ್ಯ. ಪ್ರಜಾ ಸರ್ಕಾರ ಯಶಸ್ವಿಯಾಗಬೇಕಾದರೆ ಚುನಾವಣೆಯು ಪ್ರಾಮಾಣಿಕವಾಗಿ ನಡೆಯಬೇಕು. ಆಯೋಗವು ಪಕ್ಷಪಾತ ಧೋರಣೆ ತಾಳಿದರೆ ಪ್ರಜಾಪ್ರಭುತ್ವ ವಂಚನೆಗೆ ಒಳಗಾಗುತ್ತದೆ ಎಂಬ ಅನುಮಾನ ಜನರಲ್ಲಿ ಉಂಟಾಗುತ್ತದೆ. ಸಂವಿಧಾನಾತ್ಮಕ ಸಂಸ್ಥೆ ಹೀಗಾದರೆ ದೇಶದ ಗತಿ ಏನು?

- ನಂಜನಹಳ್ಳಿ ನಾರಾಯಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT