ADVERTISEMENT

ಬೇಜವಾಬ್ದಾರಿತನದ ನಡೆ ಸಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಏಪ್ರಿಲ್ 2021, 19:31 IST
Last Updated 11 ಏಪ್ರಿಲ್ 2021, 19:31 IST

ಬೇಜವಾಬ್ದಾರಿತನದ ನಡೆ ಸಲ್ಲ

ವಿಮಾನ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ಪರಿಶೀಲನೆ ಕಡ್ಡಾಯಗೊಳಿಸಬೇಕು ಎಂಬುದನ್ನು ಜಯಮ್ಮ ಗೋಪಾಲಕೃಷ್ಣ ಅವರು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ (ವಾ.ವಾ., ಏ. 10). ನಿಜ, ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ವಿದೇಶಗಳಿಂದ ಯಾವುದೇ ಎಗ್ಗಿಲ್ಲದೆ ವಿಮಾನಗಳ ಮೂಲಕ ಲಕ್ಷಾಂತರ ಮಂದಿ ದೇಶವನ್ನು ಪ್ರವೇಶಿಸಿದರು. ಆ ದಿನಗಳಲ್ಲಿ ಹೀಗೆ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಯಾವುದೇ ಪರೀಕ್ಷೆಗೂ ಒಳಪಡಿಸದೆ, ಕ್ವಾರಂಟೈನ್‌ಗೂ ಒಳಪಡಿಸದೆ ಸೀದಾಸಾದಾ ದೇಶದೊಳಕ್ಕೆ ಬಿಟ್ಟುಕೊಂಡಬೇಜವಾಬ್ದಾರಿತನದ ನಡೆಯಿಂದಾಗಿ ದೇಶದಾದ್ಯಂತ ಕೊರೊನಾ ಹರಡಿ ಜನರನ್ನು ಇನ್ನಿಲ್ಲದಂತೆ ಕಾಡುವಂತಾಯಿತು. ಕೊರೊನಾದ ಎರಡನೇ ಅಲೆ ಶುರುವಾಗಿರುವ ಈ ಸಂದರ್ಭದಲ್ಲಾದರೂ ಸರ್ಕಾರಗಳು ಎಚ್ಚರಿಕೆಯಿಂದ ವರ್ತಿಸಬೇಕು.

- ರಾಜೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.