ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ದಿಢೀರ್ ಶ್ರೀಮಂತರಾಗಲು, ಅಡಿಕೆ ಮಾರಾಟದ ಹಣ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಯನ್ನು ಅಪಹರಿಸಿ, ಅವರಿಂದ ₹ 26 ಲಕ್ಷ ಸುಲಿಗೆ ಮಾಡಿ ತಮ್ಮ ವೃತ್ತಿಗೆ ಅಗೌರವ ತಂದಿರುವುದು (ಪ್ರ.ವಾ., ಆ. 25) ನಾಚಿಕೆಗೇಡು.
ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆಯಿಂದ ಅವರು ಕೀರ್ತಿ, ಉನ್ನತ ಹುದ್ದೆ ಎಲ್ಲವನ್ನೂ ಗಳಿಸಬಹುದಿತ್ತು. ಹೀಗಿರುವಾಗ, ಪೊಲೀಸ್ ಅಧಿಕಾರಿಯಂತಹ ಪ್ರಭಾವಿ ಹುದ್ದೆಯಲ್ಲಿದ್ದೂ ಸುಲಿಗೆ ಮಾಡುವ ಮನಃಸ್ಥಿತಿ ಇವರಿಗೆ ಹೇಗೆ ಬಂತು? ರಕ್ಷಕರೇ ಭಕ್ಷಕರಾದರೆ ಇನ್ನು ಜನಸಾಮಾನ್ಯರ ಪಾಡೇನು?
-ಸಾ.ಮ.ಶಿವಮಲ್ಲಯ್ಯ,ಸಾಸಲಾಪುರ, ಕನಕಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.