ADVERTISEMENT

ಕುರ್ಚಿ ರಕ್ಷಿಸುವ ಕೆಲಸವೇಕೆ?

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 19:31 IST
Last Updated 13 ಜೂನ್ 2021, 19:31 IST

ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಭದ್ರಪಡಿಸಲು ಸ್ವಾಮೀಜಿಗಳ ದಂಡೇ ನಿಂತಂತಿದೆ. ಆಧ್ಯಾತ್ಮಿಕ ಚಿಂತನೆ ಮಾಡಿಕೊಂಡು, ಭಕ್ತರನ್ನು ಆಶೀರ್ವದಿಸುತ್ತಾ, ಲೋಕ‌ಕಲ್ಯಾಣದ ಹಿತವನ್ನು ಬಯಸುವುದು ಸ್ವಾಮೀಜಿಗಳ ಧರ್ಮ. ಅದು ಬಿಟ್ಟು ಒಬ್ಬ ರಾಜಕೀಯ ನಾಯಕನ ಹಿಂದೆ ನಿಂತು ರಾಜಕೀಯ ರಕ್ಷಣೆ ಕೊಡುತ್ತಿರುವ ಸ್ವಾಮೀಜಿಗಳ ಚಿತ್ರವೊಂದನ್ನು ಇಂದು ದಿನಪತ್ರಿಕೆಯಲ್ಲಿ ನೋಡಿ ಮುಜುಗರವಾಯಿತು! ಈ ಬಗೆಯ ಬೆಳವಣಿಗೆ ರಾಜಕೀಯ, ಧಾರ್ಮಿಕ ಎರಡೂ ಕ್ಷೇತ್ರಗಳಿಗೆ ಒಳ್ಳೆಯದಲ್ಲ. ಇದು ನಿಲ್ಲಲಿ.

-ವೀರೇಶ ಬಂಗಾರಶೆಟ್ಟರ,ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT