ADVERTISEMENT

ವಿಷಯಾಧಾರಿತ ಇರಲಿ;ಅಧಿಕಾರದ ಆಸೆಗೆ ಬೇಡ

ಶಿವರಂಜನ್ ಸತ್ಯಂಪೇಟೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಸಾರ್ವಜನಿಕರ ಸಮಸ್ಯೆ ಅಥವಾ ವಿಷಯಾಧಾರಿತ ಭಿನ್ನಾಭಿಪ್ರಾಯಗಳಿಂದಾಗಿ ಪ್ರಾದೇಶಿಕ ಪಕ್ಷಗಳ ರಚನೆಯಾಗುವ ಬದಲು ಕೇವಲ ವೈಯಕ್ತಿಕ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳು ಉದಯವಾಗುತ್ತಿರುವುದು ವಿಷಾದದ ಸಂಗತಿ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನೈಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ತಮ್ಮ ಸ್ವಹಿತಾಸಕ್ತಿಯಿಂದಾಗಿ ಪಕ್ಷ ರಚನೆಗೆ ಮುಂದಾಗಿರುವುದು ತರವಲ್ಲ. ಅಧಿಕಾರ ಆಕಾಂಕ್ಷೆಯೇ ಮುಖ್ಯವಾಗಬಾರದು. ಅಂದ ಮಾತ್ರಕ್ಕೆ ಪ್ರಾದೇಶಿಕ ಪಕ್ಷ ರಚನೆ ಅಗತ್ಯವಿಲ್ಲ ಎಂದು ಹೇಳಲು ಬರುವುದಿಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾದೇಶಿಕ ಪಕ್ಷಗಳು ನೆಲೆ ಕಂಡುಕೊಳ್ಳುತ್ತಿಲ್ಲವೆಂದರೆ ಪುನಃ ಅಂತಹ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

“ಸಾರ್ವಜನಿಕರ ಸಮಸ್ಯೆ, ವಿಷಯಾಧಾರಿತ ಇಲ್ಲವೇ ಅವುಗಳ ಇತ್ಯರ್ಥಕ್ಕಾಗಿ ನೂತನ ಪಕ್ಷವನ್ನು ರಚಿಸುವುದರಲ್ಲಿ ತಪ್ಪೇನಿಲ್ಲ”  ಎಂದು ಮಾಜಿ ಸಚಿವ ವೈಜನಾಥ ಪಾಟೀಲ ತಿಳಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.