ADVERTISEMENT

ವೀರಶೈವರು ಶೂದ್ರರಲ್ಲ

ಡಾ.ಕೆ.ಎನ್.ಬಿ.ರಾಜ್, ದೊಡ್ಡಬಳ್ಳಾಪುರ
Published 17 ಮಾರ್ಚ್ 2013, 19:59 IST
Last Updated 17 ಮಾರ್ಚ್ 2013, 19:59 IST

`ಕೊಳಕಿನಿಂದ ಶುದ್ಧತೆಯೆಡೆಗೆ' (ಜಾತಿ ಸಂವಾದದ, ಮಾ.4) ಎಂಬ ಬರಹದಲ್ಲಿ ಪ್ರೊ. ಎಂ. ಯು. ಕೃಷ್ಣಯ್ಯನವರು ವೀರಶೈವರ ಬಗ್ಗೆ ಬರೆದಿರುವ ಶೂದ್ರರು ಎಂಬ ಪದವು ಕೀಳು ಮನೋಭಾವ ಹಾಗೂ ಪೂರ್ವಗ್ರಹ ಪೀಡಿತವಾದುದು. ಇದು ವೀರಶೈವ ಧರ್ಮದ ಬಗೆಗೆ ಅವರಿಗಿರುವ ಅಧ್ಯಯನದ ಕೊರತೆಯನ್ನು ಎತ್ತಿ ಹಿಡಿದಂತಿದೆ.

ವೀರಶೈವರು ಶೂದ್ರರಾದರೂ ಶಿವದಾರ ಧರಿಸಿ ಬ್ರಾಹ್ಮಣರಿಗೆ ಸರಿ ಸಮಾನ ಸ್ಥಾನ ಪಡೆಯಲು ಸಮರ್ಥರಾದರು ಎಂಬುದಾಗಿ ಮೊದಲಿಗೆ ತೆಗಳಿ ನಂತರ ಹೊಗಳಿರುವ ಇವರ ದ್ವಂದ್ವ ನಿಲುವೇ ಇವರಲ್ಲಿರುವ ಪೂರ್ವಗ್ರಹವನ್ನು ಪ್ರತಿಬಿಂಬಿಸುತ್ತದೆ. ವೀರಶೈವರು ಶೂದ್ರರು ಎಂದಿರುವ ಅವರ ನಿಲುವಿಗೆ ಇರುವ ಮಾನದಂಡವಾದರೂ ಯಾವುದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.