ನನಗೆ ಒಂದು ಕೋಟಿ ರೂಪಾಯಿ ಸಿಕ್ಕರೆ ಜನರ ಅಭಿವೃದ್ಧಿಗೆ ವಿನಿಯೋಗ ಮಾಡುತ್ತೇನೆ. ಮೊದಲು ನನ್ನ ಗ್ರಾಮದ ಎಲ್ಲ ಕೆರೆಗಳ ಹೂಳು ತೆಗೆಸುತ್ತೇನೆ. ಮಳೆಗಾಲದಲ್ಲಿ ಅದಕ್ಕೆ ನೀರು ತುಂಬಿಸುತ್ತೇನೆ.
ಇದರಿಂದ ಕುಡಿಯುವ ನೀರಿನ ಕೊರತೆ ನೀಗುತ್ತದೆ. ಅಂತರ್ಜಲ ಮಟ್ಟ ಮೇಲಕ್ಕೆ ಬಂದರೆ ರೈತರಿಗೂ ಉಪಯೋಗವಾಗುತ್ತದೆ. ಶಾಲೆ ತೆರೆಯುತ್ತೇನೆ. ಶಿಕ್ಷಕ ತರಬೇತಿಯನ್ನು ಪಡೆದು ಉದ್ಯೋಗವಿಲ್ಲದೇ ಇರುವವರನ್ನು ಶಿಕ್ಷಕರಾಗಿ ನೇಮಿಸಿಕೊಳ್ಳುತ್ತೇನೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುತ್ತೇನೆ.
ಪ್ರಕಾಶ ಎಸ್. ಮನ್ನಂಗಿ, ಮೋಟೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.