ADVERTISEMENT

ಅಂಧರ ಕ್ರಿಕೆಟ್ ಟೂರ್ನಿ;ಇಂಡಿಯಾ ಗ್ರೀನ್ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ಇಂಡಿಯಾ ಯೆಲ್ಲೋ ಹಾಗೂ ಇಂಡಿಯಾ ಗ್ರೀನ್ ತಂಡಗಳು ಧಾರವಾಡದಲ್ಲಿ ಭಾನುವಾರ ಆರಂಭಗೊಂಡ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ, ಸಮರ್ಥನಂ ಹಾಗೂ ಲಯನ್ಸ್ ಕ್ಲಬ್ ಆಶ್ರಯದ    ಅಂಧರ ರಾಷ್ಟ್ರಮಟ್ಟದ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಜಯ ಸಾಧಿಸಿದವು.

ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಡಿಯಾ ಎಲ್ಲೋ ತಂಡ, ಇಂಡಿಯಾ ಬ್ಲೂ ತಂಡವನ್ನು 35 ರನ್‌ಗಳಿಂದ ಮಣಿಸಿತು.ಪಂದ್ಯಶ್ರೇಷ್ಠ ಡಿ.ವೆಂಕಟೇಶ (66, 32 ಎಸೆತ, 13 ಬೌಂಡರಿ) ಹಾಗೂ ಗಣೇಶ ಭೂಸರ (52, 36 ಎಸೆತ, 4 ಬೌಂಡರಿ) ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 213 ರನ್ ಗಳಿಸಿದ ಯೆಲ್ಲೋ ತಂಡದವರು ಎದುರಾಳಿಗಳನ್ನು 178 ರನ್‌ಗಳಿಗೆ ಕೆಡವಿದರು.

ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಡಿಯಾ ಗ್ರೀನ್ ತಂಡ, ಇಂಡಿಯಾ ರೆಡ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರ್:

ಇಂಡಿಯಾ ಎಲ್ಲೋ: 19.5 ಓವರ್‌ಗಳಲ್ಲಿ 213 (ಡಿ.ವೆಂಕಟೇಶ್ 66, ಗಣೇಶ ಭೂಸರ 52; ಹಿತೇಶ್‌ಭಾಯಿ ಪಟೇಲ್ 28ಕ್ಕೆ 2); ಇಂಡಿಯಾ ಬ್ಲೂ: 19.4 ಓವರ್‌ಗಳಲ್ಲಿ 178 (ಶೇಖರ್ ನಾಯಕ್ 69, ಹಿತೇಶ್‌ಭಾಯಿ ಪಟೇಲ್ 20; ಡಿ.ವೆಂಕಟೇಶ್ 25ಕ್ಕೆ 2, ಗಣೇಶ ಭೂಸರ 12ಕ್ಕೆ 2). ಇಂಡಿಯಾ ಎಲ್ಲೋಗೆ 35 ರನ್ ಜಯ.

ಇಂಡಿಯಾ ರೆಡ್: 16.5 ಓವರ್‌ಗಳಲ್ಲಿ 144 (ಜೆ.ಪ್ರಕಾಶ 41, ಮನೀಶ್ 32; ಅಜಯ್ ರೆಡ್ಡಿ 30ಕ್ಕೆ 1, ರವಿ 19ಕ್ಕೆ 1); ಇಂಡಿಯಾ ಗ್ರೀನ್: 12.1 ಓವರ್‌ಗಳಲ್ಲಿ 1 ವಿಕೆಟ್‌ಗೆ 145 (ಕೇತನ್ ಪಟೇಲ್ 80, ದಿಲೀಪ್ ಮುಂಡೆ 41). ಇಂಡಿಯಾ ಗ್ರೀನ್‌ಗೆ 9 ವಿಕೆಟ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.