ಬೆಂಗಳೂರು: ಕರ್ನಾಟಕದ ಮನೀಷ್ ಪಾಂಡೆ ಹಾಗೂ ಸಿ.ಗೌತಮ್ ಅವರು ರಣಜಿ ಚಾಂಪಿಯನ್ ರಾಜಸ್ತಾನ ಎದುರು ಅ. 1ರಿಂದ 5ರವರೆಗೆ ಜೈಪುರದಲ್ಲಿ ನಡೆಯಲಿರುವ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಭಾರತ ಇತರೆ ತಂಡ ಇಂತಿದೆ: ಪಾರ್ಥಿವ್ ಪಟೇಲ್ (ನಾಯಕ/ವಿಕೆಟ್ ಕೀಪರ್), ಶಿಖರ್ ಧವನ್, ಅಭಿನವ್ ಮುಕುಂದ್, ಆಜಿಂಕ್ಯ ರಹಾನೆ, ಮನೀಷ್ ಪಾಂಡೆ, ರವೀಂದ್ರ ಜಡೇಜಾ, ಮಂದೀಪ್ ಸಿಂಗ್, ಪ್ರಗ್ಯಾನ್ ಓಜಾ, ರಾಹುಲ್ ಶರ್ಮ, ಉಮೇಶ್ ಯಾದವ್, ವರುಣ್ ಆ್ಯರೋನ್, ಪ್ರಶಾಂತ್ ಪರಮೇಶ್ವರನ್, ಪವನ್ ಸುಯಾಲ್, ಜಲಜ್ ಸಕ್ಸೇನಾ ಹಾಗೂ ಸಿ.ಗೌತಮ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.