ADVERTISEMENT

ಕಬಡ್ಡಿ: ಬೆಂಗಳೂರು ಬುಲ್ಸ್‌ನಲ್ಲಿ ಉಳಿದ ರೋಹಿತ್

ಅಕ್ಟೋಬರ್ 19 ರಿಂದ ಪ್ರೊ ಕಬಡ್ಡಿ ಲೀಗ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 20:17 IST
Last Updated 10 ಏಪ್ರಿಲ್ 2018, 20:17 IST
ರೋಹಿತ್ ಕುಮಾರ್
ರೋಹಿತ್ ಕುಮಾರ್   

ಬೆಂಗಳೂರು: ಈ ವರ್ಷದ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಆಡಲಿರುವ ಬೆಂಗ ಳೂರು ಬುಲ್ಸ್‌ ತಂಡವು  ರೋಹಿತ್ ಕುಮಾರ್ ಅವರನ್ನು ಉಳಿಸಿಕೊಂಡಿದೆ.

ಹೋದ ವರ್ಷದ ಟೂರ್ನಿಯಲ್ಲಿ ತಂಡವನ್ನು ರೋಹಿತ್  ಮುನ್ನಡೆಸಿದ್ದರು. ಅಕ್ಟೋಬರ್ 19 ರಿಂದ ಆರಂಭ ವಾಗಲಿರುವ ಆರನೆ ಆವೃತ್ತಿಯ ಟೂರ್ನಿಯಲ್ಲಿ ಆಡುವ ತಂಡಗಳು ಒಟ್ಟು 21 ಆಟಗಾರರನ್ನು ಉಳಿಸಿಕೊಂಡಿವೆ. 

ಯು ಮುಂಬಾ, ತೆಲುಗು ಟೈಟನ್ಸ್ ಹಾಗೂ ಪಟ್ನಾ ಪೈರೇಟ್ಸ್ ತಂಡಗಳು ಕ್ರಮವಾಗಿ  ಅನೂಪ್ ಕುಮಾರ್, ರಾಹುಲ್ ಚೌಧರಿ ಹಾಗೂ ಮೋನು ಗೋಯೆತ್ ಅವರನ್ನು ಕೈಬಿಟ್ಟಿವೆ.

ADVERTISEMENT

ತಂಡಗಳು ಉಳಿಸಿಕೊಂಡ ಆಟಗಾರರು: 

ಸುರ್ಜೀತ್ ಸಿಂಗ್, ಮಣಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್)

ಮಿರಾಜ್ ಶೇಖ್ (ದಬಂಗ್ ಡೆಲ್ಲಿ)

ಸಚಿನ್ ತನ್ವರ್, ಸುನಿಲ್ ಕುಮಾರ್, ಮಹೇಂದರ್, ಗಣೇಶ್ ರಜಪೂತ್ (ಗುಜರಾತ್ ಫಾರ್ಚೂನ್'ಜೈಂಟ್ಸ್)

ಕುಲದೀಪ್ ಸಿಂಗ್ (ಹರಿಯಾಣ ಸ್ಟೀಲರ್ಸ್)

ಪ್ರದೀಪ್ ನರ್ವಾಲ್, ಜೈದೀಪ್, ಜವಾಹರ್ ಡಾಗರ್, ಮನೀಷ್ ಕುಮಾರ್ (ಪಟ್ನಾ ಪೈರೇಟ್ಸ್)

ಸಂದೀಪ್ ನರ್ವಾಲ್, ರಾಜೇಶ್ ಮಂಡಲ್, ಮೋರೆ ಜಿಬಿ, ಗಿರೀಶ್ ಎರ್ನಾಕ್ (ಪುಣೇರಿ ಪಲ್ಟನ್)

ಅಜಯ್ ಠಾಕೂರ್, ಅಮಿತ್ ಹೂಡಾ, ಸಿ. ಚರಣ್ (ತಮಿಳ್ ತಲೈವಾಸ್)

ನೀಲೇಶ್ ಸಾಳುಂಕೆ, ಮೋಹಸೀನ್ ಮಗ್ಸೊದುಲ್ ಜಾಫ್ರಿ (ತೆಲುಗು ಟೈಟನ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.