ADVERTISEMENT

ಕೊಚ್ಚಿ ತಂಡ ಸಂಪರ್ಕಿಸಿಲ್ಲ: ಗಂಗೂಲಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2011, 19:30 IST
Last Updated 27 ಜನವರಿ 2011, 19:30 IST
ಕೊಚ್ಚಿ ತಂಡ ಸಂಪರ್ಕಿಸಿಲ್ಲ: ಗಂಗೂಲಿ
ಕೊಚ್ಚಿ ತಂಡ ಸಂಪರ್ಕಿಸಿಲ್ಲ: ಗಂಗೂಲಿ   

ಕೋಲ್ಕತ್ತ (ಐಎಎನ್‌ಎಸ್): ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಕೊಚ್ಚಿ ಫ್ರಾಂಚೈಸಿ ತನ್ನನ್ನು ಸಂಪರ್ಕಿಸಿಲ್ಲ ಎಂದು ಭಾರತ ತಂಡದ ಮಾಜಿ ಆಟಗಾರ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಐಪಿಎಲ್ ಆಟಗಾರರ ಹರಾಜಿನ ವೇಳೆ ಎಲ್ಲ ಫ್ರಾಂಚೈಸಿಗಳು ಗಂಗೂಲಿ ಅವರನ್ನು ಕಡೆಗಣಿಸಿದ್ದವು. ಆದರೆ ಕೊಚ್ಚಿ ಫ್ರಾಂಚೈಸಿ ಗಂಗೂಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕತೆ ತೋರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.


ಗಂಗೂಲಿ ಅಂತಹ ವರದಿಯನ್ನು ಅಲ್ಲಗಳೆದಿದ್ದಾರೆ. ‘ಕೊಚ್ಚಿ ತಂಡದ ಬಗ್ಗೆ ನನಗೆ ಹೆಚ್ಚಿನ ಅರಿವು ಇಲ್ಲ. ಆ ತಂಡದ ಕುರಿತು ನನಗಿಂತ ಹೆಚ್ಚಿನ ಜ್ಞಾನ ನಿಮಗಿರಬಹುದು.ಯಾವುದೇ ತಂಡ ನನ್ನನ್ನು ಸಂಪರ್ಕಿಸಿಲ್ಲ’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡಿರುವ ಭಾರತ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಗಂಗೂಲಿ, ‘ವೇಗದ ಬೌಲರ್ ಎಸ್. ಶ್ರೀಶಾಂತ್‌ಗೆ ತಂಡದಲ್ಲಿ ಸ್ಥಾನ ನೀಡಬೇಕಿತ್ತು’ ಎಂದರು. 15 ಸದಸ್ಯರ ತಂಡದಲ್ಲಿ ಇನ್ನೊಬ್ಬ ವಿಕೆಟ್ ಕೀಪರ್‌ಗೆ ಸ್ಥಾನ ನೀಡಬೇಕಿತ್ತು ಎಂಬ ಅಭಿಪ್ರಾಯವನ್ನು ಗಂಗೂಲಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.