ತಿರುವನಂತಪುರ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದ ಸ್ಥಳಕ್ಕೆ ಸಂಬಂಧಿಸಿದ ವಿವಾದ ಬಗೆಹರಿದಿದ್ದು ತಿರುವನಂತಪುರದಲ್ಲೇ ಪಂದ್ಯ ಆಯೋಜಿಸಲು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ನಿರ್ಧರಿಸಿದೆ. ನವೆಂಬರ್ನಲ್ಲಿ ನಡೆಯಲಿರುವ ಪಂದ್ಯ ವನ್ನು ತಿರುವನಂತಪುರದಿಂದ ಕೊಚ್ಚಿಗೆ ಸ್ಥಳಾಂತರಿಸಿದ್ದಕ್ಕೆ ತೀವ್ರ ವಿರೋಧ ಎದುರಾಗಿತ್ತು.
ಗುರುವಾರ ರಾಜ್ಯ ಕ್ರೀಡಾ ಸಚಿವ ಎ.ಸಿ.ಮೊಯಿದ್ದೀನ್ ಜೊತೆ ಚರ್ಚೆ ಮಾಡಿದ ಕೆಸಿಎ ಅಧಿಕಾರಿಗಳು ಪಂದ್ಯ ವನ್ನು ಪೂರ್ವನಿರ್ಧರಿತ ಸ್ಥಳದಲ್ಲೇ ನಡೆಸಲು ತೀರ್ಮಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.