ಕಾರವಾರ: ಮಹಮ್ಮದ್ ಆರೀಫ್ ಅವರ ಆಲ್ರೌಂಡ್ ಆಟದ ನೆರವಿನಿಂದ (36 ಹಾಗೂ 29ಕ್ಕೆ2) ಬೆಳಗಾವಿ ತಂಡವು ಸೊಮವಾರ ಇಲ್ಲಿಯ ಮಾಲಾದೇವಿ ಮೈದಾನದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯ 16 ವಯಸ್ಸಿನ ಒಳಗಿನವರ ರಾಜ್ಯಮಟ್ಟದ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ತಂಡದ ವಿರುದ್ಧ ಏಳು ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಗುಲ್ಬರ್ಗಾಕ್ಕೆ ಜಯ: ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗಾ ತಂಡ ಮೈಸೂರು ತಂಡದ ವಿರುದ್ಧ 5 ವಿಕೆಟ್ ಅಂತರದ ಗೆಲುವು ಪಡೆಯಿತು.
ಸಂಕ್ಷಿಪ್ತ ಸ್ಕೋರ್: ಬೆಂಗಳೂರು ತಂಡ: 15 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 110 ( ಪ್ರಜ್ವಲ್ 56, ಸುನಿಲ್ ಕುಮಾರ್ 25, ಕಶ್ಯಪ್ 21. ಮಹಮ್ಮದ್ ಆರೀಫ್ 29ಕ್ಕೆ2, ದರ್ಶನ್ ಉಪಾಧ್ಯ 14ಕ್ಕೆ1); ಬೆಳಗಾವಿ ತಂಡ: 14 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 113 (ನಿಖಿಲ್ 39, ಮಹಮ್ಮದ್ ಆರೀಫ್ 36, ಇಶಾಕ್ 18. ಪ್ರೇರಣ್ 23ಕ್ಕೆ1)
ಮೈಸೂರು ತಂಡ: 15 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 102 (ಸಾಘನಿಕ್ 20, ಜಿತೇಶ್ 12. ವಿಶ್ವನಾಥ 14ಕ್ಕೆ3, ರಾಹುಲ್ 18ಕ್ಕೆ1); ಗುಲ್ಬರ್ಗ ತಂಡ: 14.3 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 105 (ಅಕ್ಷೋಭ್ಯ 26, ವಿಶ್ವನಾಥ 21. ಜಿತೇಶ 13ಕ್ಕೆ2, ಅಲ್ವಿನ್ 23ಕ್ಕೆ2. ಸಾಘನಿಕ್ 10ಕ್ಕೆ1)
ಫುಟ್ಬಾಲ್: ವೇದ ವಿಜ್ಞಾನ ತಂಡಕ್ಕೆ ಜಯ
ಬೆಂಗಳೂರು: ಆಜಾದ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ವೇದ ವಿಜ್ಞಾನ ಮಹಾ ಪೀಠ ತಂಡ ಇಲ್ಲಿ ನಡೆಯುತ್ತಿರುವ ಮಹೀಂದ್ರಾ ಯೂತ್ ಫುಟ್ಬಾಲ್ ಚಾಲೆಂಜ್ ಟೂರ್ನಿಯ ಪಂದ್ಯದಲ್ಲಿ ಜಯ ಪಡೆಯಿತು.
ಅಶೋಕನಗರ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವೇದ ವಿಜ್ಞಾನ ತಂಡ 7-0 ರಲ್ಲಿ ನ್ಯೂ ಬಾಲ್ಡ್ವಿನ್ ತಂಡವನ್ನು ಮಣಿಸಿತು.
ಆಜಾದ್ ಅವರು ಪಂದ್ಯದ 2, 10 ಮತ್ತು 19ನೇ ನಿಮಿಷಗಳಲ್ಲಿ ಗೋಲುಗಳನ್ನು ತಂದಿತ್ತರು. ಇತರ ಪಂದ್ಯಗಳಲ್ಲಿ ಕ್ರಿಸ್ಟೆಲ್ ಹೌಸಿಂಗ್ ಲರ್ನಿಂಗ್ ಸ್ಕೂಲ್ 1-0 ರಲ್ಲಿ ವಿವೇಕಾನಂದ ತಂಡದ ವಿರುದ್ಧವೂ, ಶ್ರೀ ಶ್ರೀ ರವಿಶಂಕರ ವಿದ್ಯಾಲಯ 1-0 ರಲ್ಲಿ ಡಿಪಿಎಸ್ ಮೇಲೂ ಜಯ ಪಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.