ADVERTISEMENT

ಕ್ರಿಕೆಟ್: ಸಿ.ಕೆ. ನಾಯ್ಡು ಟ್ರೋಫಿಗೆ ಕರ್ನಾಟಕ ತಂಡ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬರೋಡಾ ಹಾಗೂ ಬೆಂಗಳೂರಿನಲ್ಲಿ ಅಕ್ಟೋಬರ್ 14 ಹಾಗೂ 15ರಂದು ನಡೆಯಲಿರುವ 22 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ  ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಶನಿವಾರ ಪ್ರಕಟಿಸಿದೆ.

ಈ ಟೂರ್ನಿಗೆ ಆಯ್ಕೆಯಾದ ಆಟಗಾರರು ಮೂರು ಪಾಸ್ ಫೋಟೊ, ಜನ್ಮ ದಿನಾಂಕದ ಪ್ರಮಾಣ ಪತ್ರ ಸೇರಿದಂತೆ ಇತರ ದಾಖಲೆಗಳನ್ನು ನೀಡಬೇಕು ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ತಂಡ ಇಂತಿದೆ: ಕರುಣ್ ನಾಯರ್, ಸೂರಜ್ ಸಂಪತ್, ಶಿಶಿರ್ ಭವಾನಿ, ನಿರ್ಮಿತ್ ನಿತ್ಯಾನಂದ್, ಶ್ರೇಯಸ್ ಗೋಪಾಲ್, ಅಬ್ರಾರ್ ಖಾಜಿ, ದಿನೇಶ್ ಬೊರ್ವಾಂಕರ್ (ವಿಕೆಟ್ ಕೀಪರ್), ಜೀಶಾನ್ ಅಲಿ ಸಯ್ಯದ್, ಎಂ. ಡೇವಿಡ್, ಪಿ. ಮಗಿಯಂದನ್, ರೋನಿತ್ ಪಿ. ಮೋರೆ, ಎಂ. ಕುಣಿಯನ್ ಅಬ್ಬಾಸ್, ಸಂಜಯ್ ರಂಜನ್ ಕುಮಾರ್, ಜಿ.ಎಸ್. ಚೀರಜಿಂವಿ (ವಿಕೆಟ್ ಕೀಪರ್),

ಮೊಹಮ್ಮದ್ ಸರ್ಫರಾಜ್ ಅಶ್ರಫ್, ಹರ್ಡಿಕ್ ಮುನೋತ್, ಎಂ. ಪರಪ್ಪ, ಸಚಿನ್ ಶಿಂಧೆ, ಎಚ್.ಎಸ್. ಶರತ್, ಜೆ. ಸುಚಿತ್, ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಪವನ್ ದೇಶಪಾಂಡೆ, ಮನೀಷ್ ಪಾಂಡೆ, ಮೊಹಮ್ಮದ್ ಸಲಾವುದ್ದೀನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.