ಮೈಸೂರು: ಕರ್ನಾಟಕದ ಆಟಗಾರ ಎಂ.ಎಸ್. ಸಾರಂಗ್ ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ದ್ವಿತೀಯ ಎಂಡಿಸಿಎ ಅಖಿಲ ಭಾರತ ಫಿಡೆ ರೇಟಿಂಗ್ ಮುಕ್ತ ಚೆಸ್ ಟೂರ್ನಿಯಲ್ಲಿ ಭಾನುವಾರ ಮೂರು ಸುತ್ತುಗಳಿಂದ ಮೂರು ಪಾಯಿಂಟ್ ಗಳಿಸಿ ಮುನ್ನಡೆ ಸಾಧಿಸಿದ್ದಾರೆ.
ಟೆರೆಷಿಯನ್ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಟೂರ್ನಿಯ ಮೂರನೇ ಸುತ್ತಿನಲ್ಲಿ ಎಂ. ಎಸ್. ಸಾರಂಗ್ ತಾಳ್ಮೆಯಿಂದ ಆಡಿ, ತಮಿಳುನಾಡಿನ ಅನುಭವಿ ಆಟಗಾರ ಅರವಿಂದ ಚಿದಂಬರಂ ಅವರನ್ನು ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.