ADVERTISEMENT

ಟಿಟಿ: ಸಾನ್ವಿ, ಆಯುಷ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 20:08 IST
Last Updated 7 ಅಕ್ಟೋಬರ್ 2017, 20:08 IST
ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು. ನೀರಜ ರಾಜ್‌, ಕೆ. ಆಯುಷ್‌, ಸಾನ್ವಿ ಮಂಡೇಕರ್‌, ಡಿ. ಕಲ್ಯಾಣಿ ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ
ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು. ನೀರಜ ರಾಜ್‌, ಕೆ. ಆಯುಷ್‌, ಸಾನ್ವಿ ಮಂಡೇಕರ್‌, ಡಿ. ಕಲ್ಯಾಣಿ ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ   

ಧಾರವಾಡ: ಕೆ. ಆಯುಷ್‌ ಮತ್ತು ಸಾನ್ವಿ ಮಂಡೇಕರ್‌ ಅವರು ಕಾಸ್ಮಸ್‌ ಕ್ಲಬ್‌ ಆಶ್ರಯದ ರಾಜ್ಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್ ಟೂರ್ನಿಯ ಮಿನಿ ಕೆಡೆಟ್‌ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ಫೈನಲ್‌ನಲ್ಲಿ ಎಸ್‌.ಬಿ. ಅಕಾಡೆ ಮಿಯ ಆಯುಷ್‌ 7–11, 11–5, 11–7, 8–11, 11–8ರಲ್ಲಿ ತಮ್ಮದೇ ಕ್ಲಬ್‌ನ ಬಿ.ಎನ್‌. ಶ್ರೀಜಿತ್‌ ಎದುರು ಜಯ ಪಡೆದರು. ಸಾನ್ವಿ 5–11, 11–9, 11–9, 11–5ರಲ್ಲಿ ಎಂ.ಎಸ್‌.ಟಿ.ಟಿ.ಎ.ನ ನೀತಿ ಅಗರವಾಲ್‌ ಎದುರು ಜಯ ಸಾಧಿಸಿದರು. ಜೂನಿಯರ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಡಿ. ಕಲ್ಯಾಣಿ 11–8, 11–7, 11–8, 11–8ರಲ್ಲಿ ಜೋಶಿ ಅಕಾಡೆಮಿಯ ಅದಿತಿ ಪಿ. ಜೋಶಿ ಅವರನ್ನು, ಬಾಲಕರ ವಿಭಾಗದಲ್ಲಿ ನೀರಜ್‌ ರಾಜ್‌ 12–10, 11–9, 11–5, 11–9ರಲ್ಲಿ ಕೆ.ಜೆ. ಆಕಾಶ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT