ಬೆಂಗಳೂರು: `ಈ ಸಲದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸಿದೆ. ನಿರೀಕ್ಷೆಯಿದೆ. ಆದರೆ ಒತ್ತಡವಿಲ್ಲ~ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಕರ್ನಾಟಕದ ಕ್ರಿಕೆಟಿಗ ಎಸ್. ಅರವಿಂದ್ ಹೇಳಿದರು.
ಮೊದಲ ಗೆಲುವಿನ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ತಂಡದ ಕೆಲ ಆಟಗಾರರು ಭಾನುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) `ಬಿ~ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು.
ಈ ವೇಳೆ ಮಾತನಾಡಿದ `ಬರ್ತಡೇ ಬಾಯ್~ ಅರವಿಂದ್, `ಆರ್ ವಿನಯ್ ಕುಮಾರ್ ತಂಡಕ್ಕೆ ಮರಳಿರುವುದು ತುಂಬಾ ಖುಷಿ ನೀಡಿದೆ. ಅನೇಕ ಸಲ ನಾನು ಅವರಿಂದ ಸಲಹೆ ಪಡೆದಿದ್ದೇನೆ. ತಂಡದಲ್ಲಿ ನನ್ನ ಸ್ಥಾನವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಯಾವುದೇ ಜವಾಬ್ದಾರಿ ಲಭಿಸಿದರೂ, ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.
ಭಾನುವಾರ 28ನೇ ವರ್ಷಕ್ಕೆ ಕಾಲಿಟ್ಟ ಅರವಿಂದ್ ತಂಡದ ಗೆಳೆಯರೊಂದಿಗೆ ಜನ್ಮದಿನದ ಸಂಭ್ರಮ ಆಚರಿಸಿಕೊಂಡರು. ಕೇಕ್ ಕತ್ತರಿಸಿ, ಎಡಗೈ ಬೌಲರ್ನ ಮುಖಕ್ಕೆ ಕೇಕ್ ಹಚ್ಚಿ ಗೆಳೆಯರು ಸಂಭ್ರಮಿಸಿದರು.
`ನೋವಿನಿಂದ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ನೆಟ್ನಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದೇನೆ~ ಎಂದು ಈ ಆಟಗಾರ ಹೇಳಿದರು. ಕಳೆದ ಸಲದ ರಣಜಿ ಋತುವಿನ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಮೊಣಕಾಲು ನೋವಿನ ಗಾಯಕ್ಕೆ ಅರವಿಂದ್ ತುತ್ತಾಗಿದ್ದರು. ಕಳೆದ ಸಲದ ಐಪಿಎಲ್ನಲ್ಲಿ 13 ಪಂದ್ಯಗಳಿಂದ 21 ವಿಕೆಟ್ ಪಡೆದು ಮಿಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.