ADVERTISEMENT

ಭಾರತ ತಂಡದಲ್ಲಿ ವೇದಾ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ 18ರಿಂದ 23ರವರೆಗೆ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಸ್ಥಾನ ಪಡೆದಿದ್ದಾರೆ.

ಸರಣಿಯ ಎಲ್ಲ ಐದು ಪಂದ್ಯಗಳು ವಿಶಾಖಪಟ್ಟಣದ ವೈಎಸ್‌ಆರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಎರಡು ಪಂದ್ಯಗಳು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದರೆ, ಕೊನೆಯ ಎರಡು ಪಂದ್ಯಗಳು ಸಂಜೆ 6.30 ರಿಂದ ನಡೆಯಲಿವೆ.

ತಂಡ ಇಂತಿದೆ: ಅಂಜುಮ್ ಚೋಪ್ರಾ (ನಾಯಕಿ), ಮಿಥಾಲಿ ರಾಜ್ ಅಮಿತಾ ಶರ್ಮ, ಜೂಲನ್ ಗೋಸ್ವಾಮಿ, ಸುಲಕ್ಷಣಾ ನಾಯಕ್, ರೀಮಾ ಮಲ್ಹೋತ್ರಾ, ಪೂನಮ್ ರಾವುತ್, ಅರ್ಚನಾ ದಾಸ್, ಎಕ್ತಾ ಬಿಸ್ತ್, ಹರ್ಮನ್‌ಪ್ರೀತ್ ಕೌರ್, ಗೋಹರ್ ಸುಲ್ತಾನಾ, ಮಮತಾ ಕನೋಜಿಯಾ, ವೇದಾ ಕೃಷ್ಣಮೂರ್ತಿ, ಎಸ್. ಶುಭಲಕ್ಷ್ಮಿ ಹಾಗೂ ಸುನಿತಾ ಆನಂದ್.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.