ADVERTISEMENT

ರಣಜಿ: ನಿಶ್ಚಲ್‌, ರೋನಿತ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:29 IST
Last Updated 28 ಅಕ್ಟೋಬರ್ 2017, 19:29 IST

ಬೆಂಗಳೂರು: ಮಹಾರಾಷ್ಟ್ರ ಎದುರಿನ ರಣಜಿ ಟ್ರೋಫಿ ಪಂದ್ಯಕ್ಕೆ ಶನಿವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಡಿ.ನಿಶ್ಚಲ್‌ ಮತ್ತು ರೋನಿತ್‌ ಮೋರೆ ಅವರು 15 ಸದಸ್ಯರ ಬಳಗದಲ್ಲಿ ಸ್ಥಾನ ಗಳಿಸಿದ್ದಾರೆ. ಅಭಿಷೇಕ್‌ ರೆಡ್ಡಿ, ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ರಾಜ್ಯ ತಂಡವನ್ನು ಮುನ್ನಡೆಸುತ್ತಿರುವ ಕಾರಣ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಶಿವಮೊಗ್ಗದಲ್ಲಿ ನಡೆದ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಕೆ.ಎಲ್‌.ರಾಹುಲ್‌ ಕೂಡ ತಂಡದಲ್ಲಿಲ್ಲ. ಮಹಾರಾಷ್ಟ್ರ ಎದುರಿನ ಪಂದ್ಯ ನವೆಂಬರ್‌ 1ರಿಂದ 4ರವರೆಗೆ ಪುಣೆಯಲ್ಲಿ ಜರುಗಲಿದೆ.

ತಂಡ ಇಂತಿದೆ: ಆರ್‌.ವಿನಯ್‌ ಕುಮಾರ್‌ (ನಾಯಕ), ಆರ್‌.ಸಮರ್ಥ್‌, ಕರುಣ್‌ ನಾಯರ್‌, ಮಯಂಕ್‌ ಅಗರವಾಲ್‌, ಮಿರ್‌ ಕೌನೇನ್‌ ಅಬ್ಬಾಸ್‌, ಪವನ್‌ ದೇಶಪಾಂಡೆ, ಸಿ.ಎಂ.ಗೌತಮ್‌ (ವಿಕೆಟ್ ಕೀಪರ್‌), ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಡಿ.ನಿಶ್ಚಲ್‌ ಮತ್ತು ರೋನಿತ್‌ ಮೋರೆ. ಮುಖ್ಯ ಕೋಚ್‌: ಪಿ.ವಿ.ಶಶಿಕಾಂತ್‌, ಸಹಾಯಕ ಕೋಚ್‌: ಜಿ.ಕೆ.ಅನಿಲ್‌ ಕುಮಾರ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.