ADVERTISEMENT

ಶ್ರೀಶಾಂತ್ ಮೇಲೆ ಮೊಕಾ ಹೇರಿಕೆ, ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 11:20 IST
Last Updated 4 ಜೂನ್ 2013, 11:20 IST

ನವದೆಹಲಿ (ಪಿಟಿಐ): ಬಂಧಿತ ಕ್ರಿಕೆಟಿಗ ಶ್ರೀಶಾಂತ ಹಾಗೂ ಇತರ 22 ಮಂದಿಯ  ಮೇಲೆ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಮೊಕಾ- ಎಂಸಿಒಸಿಎ) ಯನ್ನು ಪೊಲೀಸರು ಹೇರಿದ್ದು, ನ್ಯಾಯಾಲಯವು ಮಂಗಳವಾರ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಇದೇ ತಿಂಗಳ 18ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ

ಭೂಗತ ಜಗತ್ತಿನ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಅವರೊಂದಿಗೆ ಸೇರಿ ಆರೋಪಿಗಳು ಸಂಘಟಿತ ಅಪರಾಧ ಕೃತ್ಯಗಳನ್ನು ಎಸಗಿರುವುದರಿಂದ ಅವರ ಮೇಲೆ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ (ಮೊಕಾ-ಎಂಸಿಒಸಿಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಇದೇ ವೇಳೆ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಲೋಕೇಶ್‌ಕುಮಾರ್ ಅವರು ಸಂಘಟಿತ ಅಪರಾಧಗಳನ್ನು ತಡೆಯಲು ಮೊಕಾ ಕಾಯಿದೆಯು ಪೊಲೀಸರಿಗೆ ಆರೋಪಿಗಳ ಕಸ್ಟಡಿ ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ನೀಡುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.