
ಪ್ರಜಾವಾಣಿ ವಾರ್ತೆಬೆಂಗಳೂರು: ಉಮಾದೇವಿ ಇಲ್ಲಿ ನಡೆಯುತ್ತಿರುವ 36ನೇ ವರ್ಷದ ಬಿ.ಎಸ್. ಸಂಪತ್ ಸ್ಮಾರಕ ಸ್ನೂಕರ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 2-0ರಲ್ಲಿ ಎ. ಸತೀಶ್ ಕುಮಾರ್ ಎದುರು ಗೆಲುವು ಸಾಧಿಸಿದರು.
ನೇರ ಫ್ರೇಮ್ಗಳಲ್ಲಿ ಅಂತ್ಯ ಕಂಡ ಪಂದ್ಯದಲ್ಲಿ ಅವರು 76-64 ಹಾಗೂ 80-47ರಲ್ಲಿ ಜಯ ಪಡೆದರು.
ದಿನದ ಇತರ ಪಂದ್ಯಗಳಲ್ಲಿ ಲೆನಾರ್ಡ್ ರೊಜಾರಿಯೊ 2-1ರಲ್ಲಿ (75-85, 78-21, 89-09) ಡಾ. ರಾಜ್ಕುಮಾರ್ ಮೇಲೂ, ದೀಪಕ್ ಪಾತ್ರೆ 2-1ರಲ್ಲಿ (82-45, 84-64, 78-72) ಜಾಸಿಮ್ ತಾವಿನ್ ವಿರುದ್ಧವೂ, ಅಮಿತ್ ಭೂಷಣ್ 2-0ರಲ್ಲಿ (67-58, 72-48) ಆಸೀಫ್ ಅಲ್ತಾಫ್ ಮೇಲೂ, ಎ. ಸಂತೋಷ್ ಕುಮಾರ್ 2-0ರಲ್ಲಿ (84-31, 73-57) ಸಜನ್ ಬೋಪಣ್ಣ ವಿರುದ್ಧವೂ, ಎ.ಆರ್. ಅರ್ಜುನ್ 2-1ರಲ್ಲಿ (82-76, 67-77, 84-57) ಲೆನಾರ್ಡ್ ರೊಜಾರಿಯೊ ಮೇಲೂ ಜಯ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.