ಹಳಿಯಾಳ: ಹಳಿಯಾಳ ಕ್ರೀಡಾ ಶಾಲೆಯ ಲೀನಾ ಸಿದ್ದಿ ಅವರು ಆಳ್ವಾಸ್ನ ಆತ್ಮಶ್ರೀ ಅವರನ್ನು 2–0 ಅಂಕಗಳಿಂದ ಸೋಲಿಸುವ ಮೂಲಕ ಒನಕೆ ಓಬವ್ವ ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ಬಾಚಿಕೊಂಡರು.
ವಿ.ಆರ್.ದೇಶಪಾಂಡೆ ಮೆಮೊ ರಿಯಲ್ ಟ್ರಸ್ಟ್ ಹಾಗೂ ಉತ್ಕರ್ಷ ಉತ್ತರ ಕನ್ನಡ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಕುಸ್ತಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಇಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯ ರೋಚಕವಾಗಿತ್ತು. 70 ಕೆ.ಜಿ ಮೇಲ್ಪಟ್ಟ ಮಹಾನ್ ಭಾರತ ಕೇಸರಿ ಪ್ರಶಸ್ತಿಯಲ್ಲಿ ಎಂಇಜಿ ಬೆಂಗಳೂರಿನ ಗೋಪಾಲ ಕೋಳಿ ಅವರು ವಿಜೆಪಿ ಅಮರಗೊಂಡ ನಿರ್ವಾಣಿ ಅವರನ್ನು 10–0 ಅಂಕಗಳಿಂದ ಸೋಲಿಸಿ ಸೆಮಿ ಫೈನಲ್ ತಲುಪಿದರು.
ಬಾಲಕರ 54 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಮಹೇಶಕುಮಾರ ಪ್ರಥಮ ಸ್ಥಾನ ಪಡೆದರು. 50 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಕುಮಾರ ನಾಗೂರ, ಹಳಿಯಾಳದ ಉಶ್ರತ್ ಅವರನ್ನು ಮಣಿಸಿದರು. 46 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಕೃಷ್ಣಾ ವೈ ಪ್ರಥಮ ಸ್ಥಾನ ಪಡೆದರು.
42 ಕೆ.ಜಿ ವಿಭಾಗದಲ್ಲಿ ಹಳಿಯಾಳ ಕ್ರೀಡಾ ಶಾಲೆಯ ಸುಲೇಮಾನ್ ಸಾಬ್ ಪ್ರಥಮ ಸ್ಥಾನ ಪಡೆದರು.
38 ಕೆ.ಜಿ ವಿಭಾಗದ ಹಳಿಯಾಳದ ರೋಹನ ದೊಡಮನಿ ಪ್ರಥಮ ಸ್ಥಾನ ಪಡೆದರು. 35 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಬಸವರಾಜ, 32 ಕೆ.ಜಿ ವಿಭಾಗದಲ್ಲಿ ಬನಹಟ್ಟಿಯ ರಾಘವೇಂದ್ರ, 29 ಕೆ.ಜಿ ವಿಭಾಗದಲ್ಲಿ ಮುಧೋಳದ ನಿಂಗಪ್ಪ ಪ್ರಥಮ ಸ್ಥಾನ ಪಡೆದರು.
ಬಾಲಕಿಯರ 54 ಕೆ.ಜಿ ವಿಭಾಗದಲ್ಲಿ ಆಳ್ವಾಸ್ ನ ಲಕ್ಷ್ಮೀ ರೇಡೆಕರ ಪ್ರಥಮ, 50 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಸುವರ್ಣಾ ಪಾಟೀಲ ಪ್ರಥಮ ಸ್ಥಾನ ಪಡೆದರು.
46 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಜ್ಯೋತಿ ಘಾಡಿ, 32 ಕೆ.ಜಿ ವಿಭಾಗದಲ್ಲಿ ಆಳ್ವಾಸ್ ನ ಮಮತಾ ಕೇಳೋಜಿ, 38 ಕೆ.ಜಿ ವಿಭಾಗದಲ್ಲಿ ಹಳಿಯಾಳದ ರೂಪಾ ಕೋಲೆಕರ, 35 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಶಾಲಿನಿ ಸಿದ್ದಿ, 32 ಕೆ.ಜಿ ವಿಭಾಗದಲ್ಲಿ ಹಳಿಯಾಳದ ಅಕ್ಷತಾ, 29 ಕೆ.ಜಿ ವಿಭಾಗದಲ್ಲಿ ಶ್ವೇತಾ ಹಳಿಯಾಳ ಪ್ರಥಮ ಸ್ಥಾನ ಪಡೆದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ವಿ.ಆರ್. ದೇಶಪಾಂಡೆ ಟ್ರಸ್ಟ್ನ ಟ್ರಸ್ಟಿ ಪ್ರಶಾಂತ ದೇಶಪಾಂಡೆ, ಟೇಬಲ್ ಟೆನ್ನಿಸ್ ರಾಷ್ಟ್ರೀಯ ಆಟಗಾರ್ತಿ ಸಹನಾ ಕುಲಕರ್ಣಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.