ಬೆಂಗಳೂರು: ದಕ್ಷಿಣ ವಲಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ಗೆ ಕರ್ನಾಟಕದ ಪುರುಷ ಮತ್ತು ಮಹಿಳೆಯರ ತಂಡಗಳನ್ನು ಪ್ರಕಟಿಸಲಾಗಿದೆ.
ದಕ್ಷಿಣ ವಲಯ ಚಾಂಪಿಯನ್ಷಿಪ್ ಡಿಸೆಂಬರ್ 13ರಿಂದ 17ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ರಾಜ್ಯ ಪುರುಷರ ತಂಡಕ್ಕೆ ಅರವಿಂದ್ ನಾಯಕರಾಗಿದ್ದರೆ, ಮಹಿಳಾ ತಂಡದ ಸಾರಥ್ಯವನ್ನು ಭೂಮಿಕಾ ಅವರು ವಹಿಸಲಿದ್ದಾರೆ.
ತಂಡಗಳು: ಪುರುಷರು: ಅರವಿಂದ್ (ನಾಯಕ), ಅನಿಲ್ ಕುಮಾರ್, ಹರೀಶ್ ಮುತ್ತು ಕುಮಾರ್ (ಬ್ಯಾಂಕ್ ಆಫ್ ಬರೋಡಾ), ಮನು ಥಾಮಸ್, ಜಿನು ಥಾಮಸ್ ಮತ್ತು ರಾಜಶೇಖರ್ (ಎಂಇಜಿ ಮತ್ತು ಸೆಂಟರ್), ಅಭಿಷೇಕ್ ಗೌಡ (ಸದರ್ನ್ ಬ್ಲ್ಯೂಸ್), ಶಶಾಂಕ್ ರೈ, ಅಶ್ವಿಜ್ ವಿ. (ಮಂಗಳೂರು ಬಿ.ಸಿ), ಮನೋಜ್ ಕುಮಾರ್ (ಕ್ರೀಡಾ ವಸತಿನಿಲಯ, ಬೆಂಗಳೂರು), ಪ್ರತ್ಯಾಂಶು ಥೋಮರ್ (ಯಂಗ್ ಒರಾಯನ್ಸ್ ಎಸ್ಸಿ), ಅಚಿಂತ್ಯ ಕೃಷ್ಣ (ಬೀಗಲ್ಸ್). ಕೋಚ್: ತಾಂಕ್ಚಾನ್,
ವ್ಯವಸ್ಥಾಪಕ: ಪ್ರಭುದೇವ್.
ಮಹಿಳೆಯರು:ಭೂಮಿಕಾ (ನಾಯಕಿ), ಮಾನಸಾ (ಕ್ರೀಡಾ ಶಾಲೆ, ವಿದ್ಯಾನಗರ), ಸಂಜನಾ, ಮೇಖಲಾ ಗೌಡ, ಚಂದನಾ (ಬೀಗಲ್ಸ್), ಗ್ರೀಷ್ಮಾ ಎನ್, ಪಾವನಿ ಎಸ್ (ಮೌಂಟ್ಸ್ ಕ್ಲಬ್) ಹರಿಣಿ, ಸಂಧ್ಯಾ (ಕೆ.ಎಸ್.ಹೆಗ್ಡೆ, ನಿಟ್ಟೆ) ಅನಘಾ ನಾಗರಾಜನ್ (ಜೆಎಸ್ಸಿ) ಸಹನಾ (ಕ್ರೀಡಾ ವಸತಿನಿಲಯ, ಮೈಸೂರು) ಲೇಖನಾ ಎಂ. (ಯಂಗ್ ಒರಾಯನ್ಸ್ ಎಸ್ಸಿ). ಕೋಚ್: ಶ್ರೀನಿವಾಸ ಮೂರ್ತಿ, ವ್ಯವಸ್ಥಾಪಕಿ: ಅಂಚೆ ಅಶ್ವಥಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.