ಕರಾಚಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ₹ 11 ಕೋಟಿ ಪರಿಹಾರವನ್ನು ಪಾವತಿ ಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಎಹಸಾನ್ ಮಣಿ ಸೋಮವಾರ ತಿಳಿಸಿದ್ದಾರೆ.
ಭಾರತ ಮತ್ತು ಪಾಕ್ ನಡುವಣ ದ್ವಿಪಕ್ಷೀಯ ಸರಣಿ ಒಪ್ಪಂದವನ್ನು ಬಿಸಿಸಿಐ ಉಲ್ಲಂಘನೆ ಮಾಡಿದೆ ಅದಕ್ಕಾಗಿ ತನಗೆ ಪರಿಹಾರ ನೀಡಬೇಕು ಎಂದು ಪಿಸಿಬಿ ಈ ಹಿಂದೆ ಐಸಿಸಿಯ ವ್ಯಾಜ್ಯ ಪರಿಹಾರ ಸಮಿತಿಗೆ ದೂರು ನೀಡಿತ್ತು. ಆದರೆ ನಂತರದ ವಿಚಾರಣೆಗಳಲ್ಲಿ ಭಾರತವು ತನ್ನ ವಾದ ಮಂಡಿಸಿ ಪ್ರಕರಣದಲ್ಲಿ ಗೆಲುವು ಸಾಧಿಸಿತ್ತು. ಕಾನೂನು ಪ್ರಕ್ರಿಯೆಯಲ್ಲಿ ಖರ್ಚಾದ ಹಣವನ್ನೂ ಸೇರಿಸಿ ಪರಿಹಾರ ನೀಡಬೇಕು ಎಂದು ಬಿಸಿಸಿಐ ಆಗ್ರಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.