ADVERTISEMENT

ಕ್ಷಮೆ ಕೋರಿದ ಶಕೀಬ್ ಅಲ್ ಹಸನ್

ಪಿಟಿಐ
Published 17 ನವೆಂಬರ್ 2020, 21:17 IST
Last Updated 17 ನವೆಂಬರ್ 2020, 21:17 IST
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್   

ಢಾಕಾ : ಕೋಲ್ಕತ್ತದಲ್ಲಿ ಕಾಳಿ ಪೂಜೆ ಕಾರ್ಯಕ್ರಮವನ್ನು ಉ‌ದ್ಘಾಟಿಸಿದ್ದ ಕಾರಣಕ್ಕೆ ತಮಗೆ ಬಂದ ಬೆದರಿಕೆಗಳಿಗೆ ಮಣಿದ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಸೋಮವಾರ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.

ತಾವು ಕೇವಲ ಕಾರ್ಯಕ್ರಮಕ್ಕೆ ಹಾಜರಾಗಿದ್ದಾಗಿ, ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಶಕೀಬ್ ಅಲ್ ಹಸನ್ ಹೇಳಿಕೆ ನೀಡಿದ್ದಾರೆ.

ಅವರಿಗೆ ಬೆದರಿಕೆ ಹಾಕಿದ್ದನೆನ್ನಲಾದ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

’ಸುನಾಮಗಂಜ್‌ ಜಿಲ್ಲೆಯ 28 ವರ್ಷದ ಮೊಹಸಿನ್ ತಾಲೂಕದಾರ್ ಬೆದರಿಕೆ ಹಾಕಿದ್ದ ಯುವಕ. ದೂರು ಸಿಕ್ಕ 24 ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ. ನಮ್ಮ ವಶದಲ್ಲಿರುವ ಈ ಯುವಕನನ್ನು ವಿಚಾರಣೆ ನಡೆಸಲಾಗುತ್ತಿದೆ‘ ಎಂದುಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.