ADVERTISEMENT

ಕೂಚ್ ಬೆಹರ್‌ ಕ್ರಿಕೆಟ್ ಟೂರ್ನಿ: ಹೊರಬಿದ್ದ ಕರ್ನಾಟಕ

ಕೂಚ್ ಬೆಹರ್‌ ಟ್ರೋಫಿ ಕ್ರಿಕೆಟ್: ಮಧ್ಯಪ್ರದೇಶ ಎದುರಿನ ಮಹತ್ವದ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 18:58 IST
Last Updated 24 ಜನವರಿ 2019, 18:58 IST

ಬೆಳಗಾವಿ: ಮಧ್ಯಪ್ರದೇಶ ವಿರು ದ್ಧದ ಮಹತ್ವದಪಂದ್ಯದಲ್ಲಿ ಇನಿಂಗ್ಸ್‌ಮುನ್ನಡೆ ಪಡೆಯುವಲ್ಲಿ ವಿಫಲ ವಾದ ಕರ್ನಾಟಕ ತಂಡ 19 ವರ್ಷದೊಳಗಿನವರ ಕೂಚ್ ಬೆಹರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹೊರಬಿದ್ದಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ ಕರ್ನಾಟಕ ತಂಡದ ಹೋರಾಟವೂ ಅಂತ್ಯವಾಯಿತು. ಇನಿಂಗ್ಸ್‌ ಮುನ್ನಡೆ ಪಡೆದು ಮೂರು ಪಾಯಿಂಟ್‌ ಸಂಗ್ರಹಿಸಿ ದಮಧ್ಯಪ್ರದೇಶ ನಾಕೌಟ್‌ ಪ್ರವೇಶಿಸಿತು.

ದ್ವಿತೀಯ ಇನಿಂಗ್ಸ್‌ನಲ್ಲಿಸೊಗಸಾದ ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶದ ಸೂರಜ್‌ವಶಿಷ್ಠ (125, 281ಎಸೆತ, 16 ಬೌಂಡರಿ, 3 ಸಿಕ್ಸರ್‌) ಆಟದ ಬಲದಿಂದ ತಂಡ 124.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 344 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು. ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 23 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 70 ರನ್‌ ಗಳಿಸಿದ್ದಾಗ ಆಟಕ್ಕೆ ತೆರೆಬಿತ್ತು.

ADVERTISEMENT

‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರ ಐದು ಸ್ಥಾನ ಪಡೆದ ಉತ್ತರ ಪ್ರದೇಶ (45 ಅಂಕ), ಮಹಾರಾಷ್ಟ್ರ (33), ವಿದರ್ಭ (29), ಮಧ್ಯಪ್ರದೇಶ (28) ಮತ್ತು ರಾಜಸ್ಥಾನ (28) ತಂಡಗಳುನಾಕೌಟ್‌ ತಲುಪಿದವು. 27 ಅಂಕ ಗಳಿಸಿದ ಕರ್ನಾಟಕಕ್ಕೆ ಆರನೇ ಸ್ಥಾನ.

ಸಂಕ್ಷಿಪ್ತ ಸ್ಕೋರು:ಮಧ್ಯಪ್ರದೇಶ ಮೊದಲ ಇನಿಂಗ್ಸ್‌: 275; ದ್ವಿತೀಯ ಇನಿಂಗ್ಸ್‌: 124.4 ಓವರ್‌ಗಳಲ್ಲಿ 4 ವಿಕೆಟ್‌ಗೆ 344 ಡಿಕ್ಲೇರ್ಡ್‌(ದೇವ್‌ ಬರ್ನಲ್‌ 83, ಸೂರಜ್‌ ವಶಿಷ್ಠ 125, ಬಿ. ವಿಕ್ರಮ್‌ ಸಿಂಗ್‌ 71, ರಾಹುಲ್‌ ಚಂದ್ರಲ್‌ 35; ದೇವದತ್ತ ಪಡಿಕ್ಕಲ್‌ 33ಕ್ಕೆ1). ಕರ್ನಾಟಕ ಮೊದಲ ಇನಿಂಗ್ಸ್‌ 189; ದ್ವಿತೀಯ ಇನಿಂಗ್ಸ್‌ 23 ಓವರ್‌ಗಳಲ್ಲಿ 1 ವಿಕೆಟ್‌ಗೆ 70.

ಫಲಿತಾಂಶ: ಡ್ರಾ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.