ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾದ ಭಾರತ ‘ಎ’ ತಂಡವನ್ನು ಮನೀಷ್ ಪಾಂಡೆ ನಾಯಕನಾಗಿ ಮುನ್ನಡೆಸುವರು. ಪಾಂಡೆ ತಂಡದಲ್ಲಿರುವ ಏಕೈಕ ಕನ್ನಡಿಗ. ಋತುರಾಜ್ ಗಾಯಕ್ವಾಡ್, ಅನ್ಮೋಲ್ಪ್ರೀತ್ ಸಿಂಗ್ ಹಾಗೂ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
22 ವರ್ಷ ವಯಸ್ಸಿನ ಮಹಾರಾಷ್ಟ್ರದ ಋತುರಾಜ್ ಅವರು, ಗಾಯಾಳು ಪೃಥ್ವಿ ಶಾ ಬದಲಿಗೆ ಸ್ಥಾನ ಗಿಟ್ಟಿಸಿದರು. ಇನ್ನೊಂದೆಡೆ ಅನ್ಮೋಲ್ಪ್ರೀತ್ ಹಾಗೂ ಕಿಶನ್ ಅವರು ಮಯಂಕ್ ಅಗರ್ವಾಲ್ ಹಾಗೂ ರಿಷಭ್ ಪಂತ್ ಬದಲಿಗೆ ತಂಡದಲ್ಲಿ ಆಡುವರು. ಮಯಂಕ್ ಹಾಗೂ ರಿಷಭ್ ಪ್ರಸ್ತುತ ವಿಶ್ವಕಪ್ ಆಡುತ್ತಿರುವ ಭಾರತ ತಂಡದಲ್ಲಿ ಇದ್ದಾರೆ.
ಜುಲೈ 11ರಿಂದ ಆರಂಭವಾಗಲಿರುವ ಸರಣಿಯಲ್ಲಿ ಭಾರತ ‘ಎ’ ತಂಡವು ವೆಸ್ಟ್ ಇಂಡೀಸ್ ‘ಎ’ ವಿರುದ್ಧ ಐದು ಏಕದಿನ ಹಾಗೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಭಾರತ ‘ಎ’ ತಂಡ: ಮನೀಷ್ ಪಾಂಡೆ (ನಾಯಕ), ಋತುರಾಜ್ ಗಾಯಕ್ವಾಡ್, ಅನ್ಮೋಲ್ಪ್ರೀತ್ ಸಿಂಗ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ಚಾಹರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕೃಣಾಲ್ ಪಾಂಡ್ಯ, ದೀಪಕ್ ಚಾಹರ್, ಖಲೀಲ್ ಅಹ್ಮದ್, ಆವೇಶ್ ಖಾನ್, ನವದೀಪ್ ಸೈನಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.