ಬೆಂಗಳೂರು: ಇದೇ 21ರಿಂದ ಒಡಿಶಾದ ಕಟಕ್ನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡವನ್ನು ಮನೀಷ್ ಪಾಂಡೆ ಮುನ್ನಡೆಸುವರು.
ಈಚೆಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದ ಬೆಳಗಾವಿಯ ಮಧ್ಯಮವೇಗಿ ರೋನಿತ್ ಮೋರೆಗೆ ವಿಶ್ರಾಂತಿ ನೀಡಲಾಗಿದೆ.
‘ರಣಜಿ ಟೂರ್ನಿಯಲ್ಲಿ ರೋನಿತ್ ಅವರು ಕರ್ನಾಟಕದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಬಿಡುವು ನೀಡಲಾಗಿದೆ’ ಎಂದು ಕೆಎಸ್ಸಿಎ ಆಯ್ಕೆ ಸಮಿತಿ ಮುಖ್ಯಸ್ಥ ರಘುರಾಮ್ ಭಟ್ ತಿಳಿಸಿದ್ದಾರೆ.
ತಂಡ ಇಂತಿದೆ: ಮನೀಷ್ ಪಾಂಡೆ (ನಾಯಕ), ಕರುಣ್ ನಾಯರ್ (ಉಪನಾಯಕ), ಮಯಂಕ್ ಅಗರವಾಲ್, ರೋಹನ್ ಕದಂ, ಬಿ.ಆರ್. ಶರತ್ (ವಿಕೆಟ್ಕೀಪರ್), ಜೆ. ಸುಚಿತ್, ಶ್ರೇಯಸ್ ಗೋಪಾಲ್, ಆರ್. ವಿನಯಕುಮಾರ್, ಪ್ರಸಿದ್ಧ ಕೃಷ್ಣ, ಅಭಿಮನ್ಯು ಮಿಥುನ್, ಕೆ.ಸಿ. ಕಾರ್ಯಪ್ಪ, ವಿ. ಕೌಶಿಕ್, ಕೆ.ವಿ. ಸಿದ್ಧಾರ್ಥ್, ಮನೋಜ್ ಭಾಂಡಗೆ, ಲವನಿತ್ ಸಿಸೊಡಿಯಾ (ವಿಕೆಟ್ಕೀಪರ್).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.