ಬೆಂಗಳೂರು: ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಶತಕ ಬಾರಿಸಿದ ಸಮಿತ್ ದ್ರಾವಿಡ್ (ಔಟಾಗದೆ 109; 180ಎಸೆತ) ಅವರ ಆಟದ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡವು 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ತಂಡಕ್ಕೆ ಕಠಿಣ ಸವಾಲೊಡ್ಡಿತು.
ಡ್ರಾದಲ್ಲಿ ಮುಕ್ತಾಯವಾದ ಈ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮೂರು ಪಾಯಿಂಟ್ ಗಳಿಸಿತು. ಗೋವಾಕ್ಕೆ ಕೇವಲ ಒಂದು ಅಂಕ ಲಭಿಸಿತು. ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಪಂದ್ಯದ ಮೊದಲ ದಿನ ಅರ್ಧಶತಕ ಗಳಿಸಿ ಕ್ರೀಸ್ನಲ್ಲಿದ್ದರು. ಎರಡನೇ ದಿನ ಶತಕ ಪೂರೈಸಿದರು.
ಸಂಕ್ಷಿಪ್ತ ಸ್ಕೋರು: ಆಲೂರು(2): ಮೊದಲ ಇನಿಂಗ್ಸ್:ಗೋವಾ ಸಿಎ: 43.1 ಓವರ್ಗಳಲ್ಲಿ 84 (ಯಶ್ ಕಸವಂಕರ್ 40, ರಾಹುಲ್ ಬೆಲ್ಲದ್ 29ಕ್ಕೆ3, ಸಮಿತ್ ದ್ರಾವಿಡ್ 7ಕ್ಕೆ2, ಹಾರ್ದಿಕ್ ರಾಜ್ 10ಕ್ಕೆ2), ಕೆಎಸ್ಸಿಎ: 66 ಓವರ್ಗಳಲ್ಲಿ 3ಕ್ಕೆ245 ಡಿಕ್ಲೆರ್ಡ್(ಆರ್. ರೋಹನ್ 27, ಸಮಿತ್ ದ್ರಾವಿಡ್ ಔಟಾಗದೆ 109, ಎಂ. ಕನಿಷ್ಕ ಔಟಾಗದೆ 51), ಎರಡನೇ ಇನಿಂಗ್ಸ್: ಗೋವಾ: 87 ಓವರ್ಗಳಲ್ಲಿ 5ಕ್ಕೆ117 (ದರ್ಪಣ್ ದಿನೇಶ್ ಪಗವಿ 28 ನಿಸರ್ಗ ನೀಲೇಶ್ ನಾಗವೇಕರ್ 31 ಹಾರ್ದಿಕ್ ರಾಜ್ 7ಕ್ಕೆ2, ಕೆ.ಪಿ. ಕಾರ್ತಿಕೆಯ 20ಕ್ಕೆ2), ಫಲಿತಾಂಶ: ಪಂದ್ಯ ಡ್ರಾ, ಕೆಎಸ್ಸಿಎಗೆ 3 ಪಾಯಿಂಟ್ಸ್, ಗೋವಾಕ್ಕೆ 1 ಪಾಯಿಂಟ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.