ADVERTISEMENT

ಕ್ರಿಕೆಟ್: ವಿಜಯಪುರದ ರಾಜೇಶ್ವರಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 18:32 IST
Last Updated 9 ಫೆಬ್ರುವರಿ 2019, 18:32 IST
ವೇದಾ ಕೃಷ್ಣಮೂರ್ತಿ (ಟ್ವಿಟರ್‌ ಚಿತ್ರ)
ವೇದಾ ಕೃಷ್ಣಮೂರ್ತಿ (ಟ್ವಿಟರ್‌ ಚಿತ್ರ)   

ಬೆಂಗಳೂರು: ಇದೇ 18ರಂದು ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ನಡೆಯಲಿರುವ ಮೂರು ಏಕದಿನ ಕ್ರಿಕೆಟ್ ಪಂದ್ಯಗಳ ಟೂರ್ನಿಯಲ್ಲಿ ಆಡಲಿರುವ ಆತಿಥೇಯರ ಭಾರತ ತಂಡದಲ್ಲಿ ವಿಜಯಪುರದ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಸ್ಥಾನ ಗಳಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಮತ್ತು ಟ್ವೆಂಟಿ–20 ಸರಣಿಯಲ್ಲಿ ರಾಜೇಶ್ವರಿ ಆಡಿರಲಿಲ್ಲ. ಮಿಥಾಲಿ ರಾಜ್ ನಾಯಕತ್ವದ ತಂಡವನ್ನು ಶನಿವಾರ ಬಿಸಿಸಿಐ ಪ್ರಕಟಿಸಿದೆ. ಮೂರು ಏಕದಿನ ಪಂದ್ಯಗಳು ನಡೆಯಲಿವೆ. 18ರಂದು ಮುಂಬೈನಲ್ಲಿ ನಡೆಯಲಿರುವ ಆಭ್ಯಾಸ ಪಂದ್ಯದಲ್ಲಿ ಆಡಲಿರುವ ಮಂಡಳಿ ಅಧ್ಯಕ್ಷರ ಇಲೆವನ್ ತಂಡವನ್ನು ಸ್ಮೃತಿ ಮಂದಾನ ಮುನ್ನಡೆಸುವರು. ಈ ತಂಡದಲ್ಲಿ ಕನ್ನಡತಿ ವೇದಾ ಕೃಷ್ಣಮೂರ್ತಿ ಇದ್ದಾರೆ.

ಎಲ್ಲ ಏಕದಿನ ಪಂದ್ಯಗಳೂ ಮುಂಬೈನಲ್ಲಿಯೇ ನಡೆಯಲಿವೆ. ಫೆ 22. 25 ಮತ್ತು 28ರಂದು ಪಂದ್ಯಗಳನ್ನು ಆಯೋಜಿಸಲಾಗಿದೆ.

ADVERTISEMENT

ತಂಡ ಇಂತಿದೆ

ಏಕದಿನ ಟೂರ್ನಿ: ಮಿಥಾಲಿ ರಾಜ್ (ನಾಯಕಿ), ಜೂಲನ್ ಗೋಸ್ವಾಮಿ, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ಆರ್. ಕಲ್ಪನಾ (ವಿಕೆಟ್‌ಕೀಪರ್), ಮೋನಾ ಮೆಷ್ರಮ್, ಏಕ್ತಾ ಬಿಷ್ಠ್, ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್, ಶಿಖಾ ಪಾಂಡೆ, ಮಾನಸಿ ಜೋಶಿ, ಪೂನಮ್ ರಾವುತ್.

ಮಂಡಳಿ ಅಧ್ಯಕ್ಷರ ಇಲೆವನ್: ಸ್ಮೃತಿ ಮಂದಾನ (ನಾಯಕಿ), ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಎಸ್. ಮೇಘನಾ, ಭಾರತಿ ಫೂಲ್‌ಮಾಲಿ, ಕೋಮಲ್ ಝಾಂಜಡ್, ಆರ್. ಕಲ್ಮನಾ, ಪ್ರಿಯಾ ಪೂನಿಯಾ, ಹರ್ಲೀನ್ ಡಿಯೊಲ್, ರೀಮಾಲಕ್ಷ್ಮೀ ಎಕ್ಕಾ, ಮನಾಲಿ ದಕ್ಷಿಣಿ, ಮಿನು ಮಣಿ, ತನುಜಾ ಕನ್ವರ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.