ADVERTISEMENT

ಆಸ್ಪತ್ರೆಯಲ್ಲಿ ಮತ್ತೊಂದು ದಿನ ಉಳಿದ ಗಂಗೂಲಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 16:17 IST
Last Updated 6 ಜನವರಿ 2021, 16:17 IST
ಆಸ್ಪತ್ರೆಯ ಹೊರಗೆ ಕಾದಿದ್ದ ಸೌರವ್ ಗಂಗೂಲಿಯವರ ಅಭಿಮಾನಿಗಳು  –ಪಿಟಿಐ ಚಿತ್ರ
ಆಸ್ಪತ್ರೆಯ ಹೊರಗೆ ಕಾದಿದ್ದ ಸೌರವ್ ಗಂಗೂಲಿಯವರ ಅಭಿಮಾನಿಗಳು  –ಪಿಟಿಐ ಚಿತ್ರ   

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮತ್ತೊಂದು ದಿನ ಆಸ್ಪತ್ರೆಯಲ್ಲಿಯೇ ಇರಲು ನಿರ್ಧರಿಸಿದ್ದರಿಂದ ಬುಧವಾರ ಮನೆಗೆ ಮರಳಲಿಲ್ಲ.

‘ಅವರು ಚೇತರಿಸಿಕೊಳ್ಳುತ್ತಿದ್ದು ಬುಧವಾರ ಮನೆಗೆ ಮರಳಬಹುದೆಂದು ಸಲಹೆ ನೀಡಿದ್ದೆವು. ಆದರೆ, ಸ್ವತಃ ಗಂಗೂಲಿಯವರೇ ಗುರುವಾರ ಮರಳುವುದಾಗಿ ತಿಳಿಸಿದ್ದಾರೆ. ನಮ್ಮ ವೈದ್ಯಕೀಯ ತಂಡವು ಅವರ ಆರೋಗ್ಯದ ಬಗ್ಗೆ ಸತತ ನಿಗಾ ವಹಿಸಿದೆ’ ಎಂದು ವುಡ್‌ಲ್ಯಾಂಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಹೋದ ಶನಿವಾರದಂದು ಲಘು ಹೃದಯಸ್ತಂಭನದಿಂದಾಗಿ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಆ್ಯಂಜಿಯೊಪ್ಲಾಸ್ಟಿ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.