ADVERTISEMENT

ಅಂಧರ ಕ್ರಿಕೆಟ್: ಭಾರತ ತಂಡಕ್ಕೆ ಅಜಯ್ ಕುಮಾರ್‌ ರೆಡ್ಡಿ ನಾಯಕ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 19:51 IST
Last Updated 29 ಸೆಪ್ಟೆಂಬರ್ 2018, 19:51 IST
ಅಜಯ್ ಕುಮಾರ್‌ ರೆಡ್ಡಿ
ಅಜಯ್ ಕುಮಾರ್‌ ರೆಡ್ಡಿ   

ಬೆಂಗಳೂರು: ಅಕ್ಟೋಬರ್ ಎರಡರಿಂದ ನಡೆಯಲಿರುವ ಇಂಗ್ಲೆಂಡ್‌ ಮತ್ತು ಶ್ರೀಲಂಕಾ ತಂಡಗಳು ಒಳಗೊಂಡ ಅಂಧರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಅಜಯ್ ಕುಮಾರ್‌ ರೆಡ್ಡಿ ಮುನ್ನಡೆಸುವರು.

ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ (ಕ್ಯಾಬಿ) 17 ಮಂದಿಯ ತಂಡವನ್ನು ಶನಿವಾರ ಪ್ರಕಟಿಸಿದೆ. ಬೆಂಗಳೂರಿನ ತಣಿಸಂದ್ರದ ಹಜ್ ಭವನ ಸಮೀಪದ ಎಸ್‌ಎಸ್‌ಇ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ತಂಡ: ಬಸಪ್ಪ ವಡ್ಡಗೋಳ, ಮಹೇಶ್ ಕುಮಾರ್ ಚೌಧರಿ, ಮೊಹಮ್ಮದ್ ಇರ್ಫಾನ್‌, ಆನಂದು ಶಶಿಕುಮಾರ್‌, ಓಂ ಪ್ರಕಾಶ್‌, ಉಮರ್ ಸಿದ್ದಿಕ್‌ (ಎಲ್ಲರೂ ಬಿ–1), ಅಜಯ್ ಕುಮಾರ್ ರೆಡ್ಡಿ (ನಾಯಕ), ಗಣೇಶ್‌ ಮುಹುದ್‌ಕರ್‌, ವೆಂಕಟೇಶ್ ಮುನಿಹರನ್‌, ಸ್ವಪ್ನಿಲ್‌ ವಾಘ್‌, ಲೋಕೇಶ, ನಕುಲ್ ಬಡನಾಯಕ (ಬಿ–2), ಸುನಿಲ್ ರಮೇಶ್ (ಉಪನಾಯಕ), ದುರ್ಗಾ ರಾವ್‌, ಪಂಕಜ್ ಭುಯಿ, ತಾಂಡವ ಕೃಷ್ಣ, ಚಂದನ್‌ (ಬಿ–3).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.