ಜೈಪುರ: ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಭಾನುವಾರ ಚೆನ್ನೈಯಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
‘ಖಚಿತ ಮಾಹಿತಿ ಆಧರಿಸಿ ಜೈಸಿಂಗಪುರ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ವೊಂದರ ಮೇಲೆ ದಾಳಿ ನಡೆಸಿದ್ದೆವು. ಅಲ್ಲಿ ಜತಿನ್ ಶಾ, ರಾಹುಲ್ ಪ್ರಜಾಪತಿ, ವಿನೋದ್ ಸಿಂಧಿ, ಹೇಮಂತ್ ಸಿಂಧಿ, ಹರೀಶ್ ಕುಮಾರ್ ಸಿಂಧಿ, ಚಂದು ಕುಮಾರ್ ಸಿಂಧಿ ಹಾಗೂ ರಾಜ್ಕುಮಾರ್ ಸಿಂಧಿ ಅವರು ಬೆಟ್ಟಿಂಗ್ನಲ್ಲಿ ತೊಡಗಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಡೆಪ್ಯೂಟಿ ಪೊಲೀಸ್ ಕಮೀಷನರ್ (ಅಪರಾಧ) ವಿಮಲ್ ಸಿಂಗ್ ತಿಳಿಸಿದ್ದಾರೆ.
‘ಬಂಧಿತರೆಲ್ಲರೂ ಅಜ್ಮೀರದವರು. ಅವರಿಂದ ₹19,240 ನಗದು, 33 ಮೊಬೈಲ್, ಎರಡು ಕಾರು, ಟಿವಿ, ಮೂರು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.