ADVERTISEMENT

ಮುಂಬೈ ಎದುರಿನ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 17:15 IST
Last Updated 17 ನವೆಂಬರ್ 2018, 17:15 IST

ಬೆಂಗಳೂರು: ನವೆಂಬರ್‌ 20ರಿಂದ 23ರವರೆಗೆ ಬೆಳಗಾವಿಯಲ್ಲಿ ನಡೆಯುವ ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಕ್ಕೆ ಶನಿವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಕರುಣ್‌ ನಾಯರ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಕೆ.ವಿ.ಸಿದ್ದಾರ್ಥ್‌, ಶಿಶಿರ್‌ ಭವಾನೆ, ಮೀರ್‌ ಕೌನೈನ್‌ ಅಬ್ಬಾಸ್‌ ಮತ್ತು ಲಿಯಾನ್‌ ಖಾನ್‌ ಅವರಿಗೆ 15 ಸದಸ್ಯರ ತಂಡದಲ್ಲಿ ಅವಕಾಶ ನೀಡಲಾಗಿದೆ.

ತಂಡ ಇಂತಿದೆ: ಆರ್‌.ವಿನಯ್‌ ಕುಮಾರ್‌ (ನಾಯಕ), ಡಿ.ನಿಶ್ಚಲ್‌, ಪವನ್‌ ದೇಶಪಾಂಡೆ, ಕೆ.ವಿ.ಸಿದ್ದಾರ್ಥ್‌, ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ಪ್ರಸಿದ್ಧ ಎಂ.ಕೃಷ್ಣ, ಜೆ.ಸುಚಿತ್‌, ರೋನಿತ್‌ ಮೋರೆ, ಶಿಶಿರ್‌ ಭವಾನೆ, ಬಿ.ಆರ್‌.ಶರತ್‌, ಶರತ್‌ ಶ್ರೀನಿವಾಸ್‌ (ಇಬ್ಬರೂ ವಿಕೆಟ್‌ ಕೀಪರ್‌), ಮೀರ್‌ ಕೌನೈನ್‌ ಅಬ್ಬಾಸ್‌ ಮತ್ತು ಲಿಯಾನ್‌ ಖಾನ್‌.

ADVERTISEMENT

ಕೋಚ್‌: ಯರೇಗೌಡ, ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌, ಮ್ಯಾನೇಜರ್‌: ಅನತೌಶ್‌ ಪಾಲ್‌, ಫೀಲ್ಡಿಂಗ್‌ ಕೋಚ್‌: ಶಬರೀಶ್‌ ಪಿ.ಮೋಹನ್‌, ಸ್ಟ್ರೆಂತ್ ಆ್ಯಂಡ್‌ ಕಂಡೀಷನಿಂಗ್‌ ಕೋಚ್‌: ರಕ್ಷಿತ್‌, ಫಿಸಿಯೊ: ಜಾಬ ಪ್ರಭು, ವಿಡಿಯೊ ವಿಶ್ಲೇಷಕ: ವಿನೋದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.