ಬೆಂಗಳೂರು: ಪ್ರತಿಭಾನ್ವಿತ, ಯುವ ಬ್ಯಾಟರ್ ಆರ್. ಸ್ಮರಣ್ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ಇಲೆವನ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ಬಳಗದಲ್ಲಿ ಭಾರತ ಟೆಸ್ಟ್ ತಂಡದ ವೇಗಿ ಪ್ರಸಿದ್ಧ ಎಂ ಕೃಷ್ಣ ಅವರೂ ಸ್ಥಾನ ಪಡೆದಿದ್ದಾರೆ.
ಗುರುವಾರದಿಂದ ಬೆಂಗಳೂರಿನಲ್ಲಿ ಈ ಟೂರ್ನಿಯು ಆರಂಭವಾಗಲಿದೆ. ಕೆಎಸ್ಸಿಎ ಆಯ್ಕೆ ಸಮಿತಿಯು ಕೆಎಸ್ಸಿಎ ಇಲೆವನ್, ಕೆಎಸ್ಸಿಎ ಅಧ್ಯಕ್ಷರ ಇಲೆವನ್, ಸೆಕ್ರೆಟರಿಸ್ ಇಲೆವನ್ ಮತ್ತು ಕೋಲ್ಟ್ಸ್ ಇಲೆವನ್ ತಂಡಗಳನ್ನು ಪ್ರಕಟಿಸಿದ್ದಾರೆ. ಯುವ ಆಟಗಾರರಿಗೆ ನಾಯಕತ್ವದ ಹೊಣೆ ವಹಿಸಲಾಗಿದೆ.
ಅಧ್ಯಕ್ಷರ ಇಲೆವನ್ಗೆ ಕಿಶನ್ ಎಸ್ ಬೆದರೆ, ಸೆಕ್ರೆಟರಿಸ್ ಇಲೆವನ್ಗೆ ನಿಕಿನ್ ಜೋಸ್ ಮತ್ತು ಕೋಲ್ಟ್ಸ್ ತಂಡಕ್ಕೆ ಅನೀಶ್ವರ್ ಗೌತಮ್ ನಾಯಕರಾಗಿದ್ದಾರೆ.
ತಂಡಗಳು ಇಂತಿವೆ:
ಕೆಎಸ್ಸಿಎ ಇಲೆವನ್: ಆರ್. ಸ್ಮರಣ್ (ನಾಯಕ), ಮೆಕ್ನಿಲ್ ಎಚ್. ನರೋನಾ, ಕೆ.ವಿ. ಅನೀಶ್, ಕೆ.ಎಲ್. ಶ್ರೀಜಿತ್ (ವಿಕೆಟ್ಕೀಪರ್), ಶ್ರೇಯಸ್ ಗೋಪಾಲ್, ಯಶೋವರ್ಧನ್ ಪರಂತಾಪ್, ಹಾರ್ದಿಕ್ ರಾಜ್, ಕೆ. ಶಶಿಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ, ಅಭಿಲಾಷ್ ಶೆಟ್ಟಿ, ಲುವನೀತ್ ಸಿಸೊಡಿಯಾ (ವಿಕೆಟ್ಕೀಪರ್), ನೇಥನ್ ಡಿಮೆಲೊ, ಪ್ರಸಿದ್ಧ ಎಂ ಕೃಷ್ಣ, ಗೌತಮ್ ಮಿಶ್ರಾ, ಸಂತೋಷ್ ಹತ್ತಿ. ಮನ್ಸೂರ್ ಅಲಿ ಖಾನ್ (ಕೋಚ್), ಇರ್ಫಾನುಲ್ಲಾ ಖಾನ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಅಭಿಷೇಕ್ ಕುಲಕರ್ಣಿ (ಫಿಸಿಯೊ), ಗಿರಿಪ್ರಸಾದ್ (ವಿಡಿಯೊ ಅನಾಲಿಸ್ಟ್).
ಕೆಎಸ್ಸಿಎ ಅಧ್ಯಕ್ಷರ ಇಲೆವನ್: ಕಿಶನ್ ಎಸ್ ಬೆದರೆ (ನಾಯಕ), ಸುಜಯ್ ಸತೇರಿ (ವಿಕೆಟ್ಕೀಪರ್), ಎಸ್.ಯು. ಕಾರ್ತಿಕ್, ಇ.ಜೆ. ಜಾಸ್ಪರ್, ಹರ್ಷವರ್ಧನ್ ಖೂಬಾ, ನಿರಂಜನ್, ಅಧೋಕ್ಷ ಹೆಗಡೆ, ಶ್ರೀಶಾ ಎಸ್. ಆಚಾರ, ಧನುಷ್ ಗೌಡ, ಆದಿತ್ಯ ನಾಯರ್, ಕೆ.ಎಂ. ಪ್ರವೇಶ್, ನಿತಿನ್ ಶಾಂತವೇರಿ, ಯಶ್ ರಾಜ್ ಪೂಂಜಾ, ರಾಜೇಂದ್ರ ಡಂಗನವರ, ಶರತ್ ಶ್ರೀನಿವಾಸ್. ಆದಿತ್ಯ ಬಿ ಸಾಗರ್ (ಕೋಚ್), ಆರ್.ಆರ್. ದೀಪು (ಕೋಚ್), ಎ. ಕಿರಣ (ಸ್ಟ್ರೆಂಥ್ – ಕಂಡಿಷನಿಂಗ್), ಅಕ್ಷಯ್ (ಫಿಸಿಯೊ), ಕಿರಣ ಕುಡತರಕರ್ (ವಿಡಿಯೊ ಅನಾಲಿಸ್ಟ್).
ಕೆಎಸ್ಸಿಎ ಸೆಕ್ರೆಟರಿ‘ಸ್ ಇಲೆವನ್: ಎಸ್.ಜೆ. ನಿಕಿನ್ ಜೋಸ್ (ನಾಯಕ), ಕೃತಿಕ್ ಕೃಷ್ಣ (ವಿಕೆಟ್ಕೀಪರ್), ಬಿ.ಎನ್. ಯಶವಂತ್, ತುಷಾರ್ ಸಿಂಗ್, ಸಮಿತ್ ದ್ರಾವಿಡ್, ಲೋಚನ್ ಎಸ್ ಗೌಡ, ಧೀರಜ್ ಜೆ ಗೌಡ, ಎಂ. ವೆಂಕಟೇಶ್, ರಾಜವೀರ್ ವಾಧ್ವಾ, ನಿಶ್ವಿತ್ ಪೈ, ಫೈಜಾನ್ ಖಾನ್ (ವಿಕೆಟ್ಕೀಪರ್), ಎಸ್.ಎಚ್. ಸ್ವರೂಪ್, ಅಭಿಷೇಕ್ ಅಹ್ಲಾವತ್, ಆದಿತ್ಯ ರಾವ್, ಮಾಧವ್ ಪಿ. ಬಜಾಜ್, ಧ್ರುವ ಪ್ರಭಾಕರ್. ಕುನಾಲ್ ಕಪೂರ್ (ಕೋಚ್), ಸ್ನೇಹಿತ್ ರೈ (ಸ್ಟ್ರೆಂಥ್–ಕಂಡಿಷನಿಂಗ್), ಅನುಷ್ (ಫಿಸಿಯೊ), ಪ್ರದೀಪ್ (ವಿಡಿಯೊ ಅನಾಲಿಸ್ಟ್).
ಕೆಎಸ್ಸಿಎ ಕೋಲ್ಟ್ಸ್ ಇಲೆವನ್: ಅನೀಶ್ವರ್ ಗೌತಮ್ (ನಾಯಕ), ಸಂಜಯ್ ಅಶ್ವಿನ್ (ವಿಕೆಟ್ಕೀಪರ್), ಪ್ರಖರ್ ಚತುರ್ವೇದಿ, ವಿಶಾಲ್ ಓನತ್, ಹರ್ಷಿಲ್ ಧರ್ಮಾನಿ, ಕೆ.ಪಿ. ಕಾರ್ತಿಕೇಯ, ಮೊಹಸಿನ್ ಖಾನ್, ಶಿಖರ್ ಶೆಟ್ಟಿ, ಸಮರ್ಥ ನಾಗರಾಜ್, ಮೊನಿಷ್ ರೆಡ್ಡಿ, ಎಸ್. ಇಶಾನ್, ಶ್ರೇಯಾಂಕ ಸಾಗರ್, ಅನಿರುದ್ಧ ಶ್ರೀನಿವಾಸ್ (ವಿಕೆಟ್ಕೀಪರ್), ಎಸ್. ತೌಫಿಕ್, ಅಭಯ್ ರಂಗನ್, ಅರವ್ ಮಹೇಶ್. ಸೋಮಶೇಖರ್ ಶಿರಗುಪ್ಪಿ (ಕೋಚ್), ಬಸವರಾಜ್ (ಸ್ಟ್ರೆಂಥ್–ಕಂಡಿಷನಿಂಗ್), ಜಾಬಿ ಮ್ಯಾಥ್ಯೂ (ಫಿಸಿಯೊ), ಪಿ. ರಾಜೀವ (ವಿಡಿಯೊ ಅನಾಲಿಸ್ಟ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.