ದಿಂಡಿಗಲ್: ಆತಿಥೇಯ ತಮಿಳುನಾಡು ಸ್ಪಿನ್ ದಾಳಿಗೆ ಪರದಾಡಿದ ಹಿಮಾಚಲ ಪ್ರದೇಶ, ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೊದಲ ದಿನವಾದ ಮಂಗಳವಾರ 158 ರನ್ನಿಗೆ ಉರುಳಿತು. ಆನುಭವಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಐದು ವಿಕೆಟ್ ಪಡೆದರು.
ಸ್ಕೋರುಗಳು: ಹಿಮಾಚಲ ಪ್ರದೇಶ: 71.4 ಓವರುಗಳಲ್ಲಿ 158 (ಸುಮೀತ್ ವರ್ಮಾ 30,ಆಕಾಶ್ ವಶಿಷ್ಟ 35, ಮಯಂಕ್ ಡಾಗರ್ 33; ಅಶ್ವಿನ್ 67ಕ್ಕೆ5, ಆರ್.ಸಾಯಿಕಿಶೋರ್ 22ಕ್ಕೆ3): ತಮಿಳುನಾಡು: ವಿಕೆಟ್ ನಷ್ಟವಿಲ್ಲದೇ 8.
ವಿಶಾಖಪಟ್ಟಣ ರೈಲ್ವೆ ಕ್ರೀಡಾಂಗಣ: ರೈಲ್ವೇಸ್: 80 ಓವರುಗಳಲ್ಲಿ 9 ವಿಕೆಟ್ಗೆ 202 (ಪ್ರೀತಮ್ ಸಿಂಗ್ 98, ಅರಿಂದಮ್ ಘೋಷ್ 32, ಕರಣ್ ಶರ್ಮಾ 52; ಜಯದೇವ ಉನದ್ಕತ್ 34ಕ್ಕೆ4, ಪ್ರೇರಕ್ ಮಂಕಡ್ 33ಕ್ಕೆ2, ಚಿರಾಗ್ ಜಾನಿ 63ಕ್ಕೆ2) ವಿರುದ್ಧ ಸೌರಾಷ್ಟ್ರ.
ಇಂದೋರ್ನಲ್ಲಿ: ಮಧ್ಯಪ್ರದೇಶ: 43.3 ಓವರುಗಳಲ್ಲಿ 125 (ಯಶ್ ದುಬೆ 48; ಅನುರೀತ್ ಸಿಂಗ್ 24ಕ್ಕೆ3, ಲುಕ್ಮನ್ ಮೆರಿವಾಲಾ 43ಕ್ಕೆ3, ಸೊಯೆಬ್ ಸೊಪಾರಿಯಾ 38ಕ್ಕೆ3);
ಬರೋಡಾ: 25 ಓವರುಗಳಲ್ಲಿ 3 ವಿಕೆಟ್ಗೆ 86 (ವಿ.ಪಿ.ಸೋಳಂಕಿ ಬ್ಯಾಟಿಂಗ್ 27, ಕೃಣಾಲ್ ಪಾಂಡ್ಯ ಬ್ಯಾಟಿಂಗ್ 22; ಅವೇಶ್ ಖಾನ್ 18ಕ್ಕೆ2).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.