ಕೋಲ್ಕತ್ತ : ಕರ್ನಾಟಕ ವಿರುದ್ಧ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಬಂಗಾಳ ತಂಡ ಪ್ರಕಟಿಸಲಾಗಿದೆ. ಒಡಿಶಾ ವಿರುದ್ಧ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
ಗಾಯಾಳಾಗಿ ಒಡಿಶಾ ವಿರುದ್ಧ ಪಂದ್ಯ ಕಳೆದುಕೊಂಡಿದ್ದ ವೇಗದ ಬೌಲರ್ ಆಕಾಶ್ ದೀಪ್ ತಂಡಕ್ಕೆ ಹಿಂತಿರುಗಿದ್ದಾರೆ.
ತಂಡ ಹೀಗಿದೆ: ಅಭಿಮನ್ಯು ಈಶ್ವರನ್ (ನಾಯಕ), ಮನೋಜ್ ತಿವಾರಿ, ಅನುಸ್ಟುಪ್ ಮಜುಂದಾರ್, ಶ್ರೀವತ್ಸ ಗೋಸ್ವಾಮಿ (ವಿಕೆಟ್ ಕೀಪರ್), ಸುದೀಪ್ ಚಟರ್ಜಿ, ಅಭಿಷೇಕ್ , ಕೌಶಿಕ್ ಘೋಷ್, ಅರ್ಣಬ್ ನಂದಿ, ಶಹಬಾಜ್ ಅಹ್ಮದ್, ಅಗ್ನೀವ್ ಪನ್, ಇಶಾನ್ ಪೊರೆಲ್, ಶ್ರೇಯನ್ ಚಕ್ರವರ್ತಿ, ನೀಲ ಕಂಠ ದಾಸ್, ಮುಕೇಶ್ ಕುಮಾರ್, ಆಕಾಶ್ ದೀಪ್, ಗೋಲಂ ಮುಸ್ತಾಫಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.