ADVERTISEMENT

ಕ್ರಿಕೆಟ್‌: ಶಿರಗುಪ್ಪಿ ಅಮಾನತು ಅವಧಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 16:11 IST
Last Updated 17 ಸೆಪ್ಟೆಂಬರ್ 2020, 16:11 IST
ಸೋಮಶೇಖರ ಶಿರಗುಪ್ಪಿ
ಸೋಮಶೇಖರ ಶಿರಗುಪ್ಪಿ   

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಎಲ್ಲ ತರಬೇತಿ ಚಟುವಟಿಕೆಗಳಿಂದ ಮೂರು ವರ್ಷ ಅಮಾನತಿಗೆ ಒಳಗಾಗಿದ್ದ ಅನುಭವಿ ಕೋಚ್‌ ಸೋಮಶೇಖರ ಶಿರಗುಪ್ಪಿ ಅವರ ಶಿಕ್ಷೆ ಅವಧಿ ಪೂರ್ಣಗೊಂಡಿದೆ.

ಈ ಕುರಿತು ಶಿರಗುಪ್ಪಿ ಅವರಿಗೆ ಇತ್ತೀಚೆಗೆ ಪತ್ರ ಕಳುಹಿಸಿರುವ ಕೆಎಸ್‌ಸಿಎ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಎನ್‌. ಪಾರ್ಥಸಾರಥಿ ‘2016ರ ನವೆಂಬರ್‌ನಿಂದ ಅರಂಭವಾಗಿದ್ದ ಅಮಾನತು 2019ರಲ್ಲಿ ಪೂರ್ಣಗೊಂಡಿದೆ’ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಅವರು ಕೆಎಸ್‌ಸಿಎ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ತೇಜಲ್‌ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.