ADVERTISEMENT

ವಿರಾಟ್ ಕೊಹ್ಲಿ ಮನಗೆದ್ದ ನೀರ್ ದೋಸೆ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 7:07 IST
Last Updated 9 ಜುಲೈ 2020, 7:07 IST
ಶ್ರೇಯಸ್‌ ಅಯ್ಯರ್‌, ವಿರಾಟ್ ಕೊಹ್ಲಿ
ಶ್ರೇಯಸ್‌ ಅಯ್ಯರ್‌, ವಿರಾಟ್ ಕೊಹ್ಲಿ   

ಮುಂಬೈ:ಭಾರತ ಕ್ರಿಕೆಟ್ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಕನ್ನಡದಕರಾವಳಿ ನೀರ್‌ ದೋಸೆ ರುಚಿಗೆ ಮನಸೋತಿದ್ದಾರೆ.

ಈ ವಿಷಯದ ಕುರಿತು ವಿರಾಟ್ ಟ್ವೀಟ್ ಮಾಡಿದ್ದಾರೆ.

‘ಬಹಳ ದಿನದ ನಂತರ ನೀರ್‌ ದೋಸೆ ಸವಿದೆ. ನಮ್ಮ ಮನೆಯಿಂದ500 ಮೀಟರ್ ದೂರದಲ್ಲಿ ಇರುವ ಶ್ರೇಯಸ್ ಅಯ್ಯರ್ ತಮ್ಮ ಮನೆಯಲ್ಲಿ ಮಾಡಿದ್ದ ನೀರ್‌ ದೋಸೆ ತಂದುಕೊಟ್ಟಿದ್ದರು. ಶ್ರೇಯಸ್ ಮತ್ತು ಅವರ ತಾಯಿಗೆ ಧನ್ಯವಾದಗಳು. ಅದಕ್ಕೆ ಪ್ರತಿಯಾಗಿ ನಾವು ಅವರಿಗೆ ಕಳಿಸಿದ ಮಷ್ರೂಮ್ ಬಿರಿಯಾನಿ ರುಚಿ ಇಷ್ಟವಾಯಿತು ಎಂದುಕೊಂಡಿರುವೆ’ ಎಂದುವಿರಾಟ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಭಾರತ ತಂಡದ ಆಟಗಾರ ಶ್ರೇಯಸ್ ಅವರ ತಾಯಿ ಮಂಗಳೂರು ಮೂಲದವರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರೂ ಆಗಿರುವ ವಿರಾಟ್,ಬೆಂಗಳೂರಿನಲ್ಲಿದ್ದಾಗ ನೀರ್‌ ದೋಸೆ ಚಟ್ನಿಯನ್ನು ತರಿಸಿಕೊಂಡು ತಿನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.