ADVERTISEMENT

ಕೆಎಸ್‌ಸಿಎ ಟಿ20: ವಲ್ಚರ್ಸ್ ಕ್ಲಬ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 21:07 IST
Last Updated 27 ಡಿಸೆಂಬರ್ 2020, 21:07 IST
ವಲ್ಚರ್ಸ್ ಕ್ರಿಕೆಟ್ ಕ್ಲಬ್‌ ತಂಡ. ಕುಳಿತವರು (ಎಡದಿಂದ): ಅನಿರುದ್ಧ ಜೋಶಿ, ಅಭಿಮನ್ಯು ಮಿಥುನ್, ಪವನ್ ದೇಶಪಾಂಡೆ, ಕರುಣ್ ನಾಯರ್, ರಾಹುಲ್ ಮೆನೋನ್ (ಕಾರ್ಯದರ್ಶಿ), ರೋನಿತ್ ಮೋರೆ, ಜೆ.ಸುಚಿತ್, ಪ್ರವೀಣ್ ದುಬೆ. (ನಿಂತವರು–ಎಡದಿಂದ): ಶ್ರೀಜಿತ್, ಸಮರ್ಥ್ ಆರ್‌, ಅಭಿಷೇಕ್, ರುಚಿರ್ ಜೋಶಿ, ನಿಶ್ಚಲ್ ಡಿ, ಸಂತೋಖ್ ಸಿಂಗ್, ಎಂ.ಬಿ.ದರ್ಶನ್ –‍‌ಪ್ರಜಾವಾಣಿ ಚಿತ್ರ
ವಲ್ಚರ್ಸ್ ಕ್ರಿಕೆಟ್ ಕ್ಲಬ್‌ ತಂಡ. ಕುಳಿತವರು (ಎಡದಿಂದ): ಅನಿರುದ್ಧ ಜೋಶಿ, ಅಭಿಮನ್ಯು ಮಿಥುನ್, ಪವನ್ ದೇಶಪಾಂಡೆ, ಕರುಣ್ ನಾಯರ್, ರಾಹುಲ್ ಮೆನೋನ್ (ಕಾರ್ಯದರ್ಶಿ), ರೋನಿತ್ ಮೋರೆ, ಜೆ.ಸುಚಿತ್, ಪ್ರವೀಣ್ ದುಬೆ. (ನಿಂತವರು–ಎಡದಿಂದ): ಶ್ರೀಜಿತ್, ಸಮರ್ಥ್ ಆರ್‌, ಅಭಿಷೇಕ್, ರುಚಿರ್ ಜೋಶಿ, ನಿಶ್ಚಲ್ ಡಿ, ಸಂತೋಖ್ ಸಿಂಗ್, ಎಂ.ಬಿ.ದರ್ಶನ್ –‍‌ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂಘಟಿತ ಆಟ ಪ್ರದರ್ಶಿಸಿದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಲ್ಚರ್ಸ್ ಕ್ಲಬ್ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ (1) ವಿರುದ್ಧ ಆರು ವಿಕೆಟ್‌ಗಳ ಜಯ ಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸ್ವಸ್ತಿಕ್ ಯೂನಿಯನ್ ಎಂಟು ವಿಕೆಟ್ ಕಳೆದುಕೊಂಡು 113 ರನ್ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ ವಲ್ಚರ್ಸ್‌ ಕ್ಲಬ್ 19ನೇ ಓವರ್‌ನಲ್ಲಿ ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರು: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ (1): 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 113 (ಕೆ.ಗೌತಮ್ 30; ದರ್ಶನ್ ಎಂ.ಬಿ 33ಕ್ಕೆ2, ಜೆ.ಸುಚಿತ್ 33ಕ್ಕೆ2); ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌: 18.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 119 (ಡಿ.ನಿಶ್ಚಲ್ 22, ಕರುಣ್ ನಾಯರ್ 23, ಅನಿರುದ್ಧ ಜೋಶಿ ಔಟಾಗದೆ 21, ಪ್ರವೀಣ್ ದುಬೆ ಔಟಾಗದೆ 30; ಆನಂದ ದೊಡ್ಡಮನಿ 25ಕ್ಕೆ2). ಫಲಿತಾಂಶ: ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌ಗೆ ಆರು ವಿಕೆಟ್‌ಗಳ ಜಯ; ಪ್ರಶಸ್ತಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.