ADVERTISEMENT

ಕೋವಿಡ್‌: ಮಾಜಿ ಫುಟ್‌ಬಾಲ್ ಆಟಗಾರ ಉದಯಕುಮಾರ್ ನಿಧನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 14:38 IST
Last Updated 30 ಏಪ್ರಿಲ್ 2021, 14:38 IST
ಉದಯ್‌ಕುಮಾರ್‌
ಉದಯ್‌ಕುಮಾರ್‌   

ಬೆಂಗಳೂರು: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಫುಟ್‌ಬಾಲ್ ಆಟಗಾರ ಉದಯ್‌ಕುಮಾರ್ (61) ಅವರು ಕೋವಿಡ್‌ನಿಂದಾಗಿ ಶುಕ್ರವಾರ ಇಲ್ಲಿ ನಿಧನರಾದರು. ಅವರಿಗೆ ಒಬ್ಬ ಪುತ್ರಿಯಿದ್ದಾರೆ.

1978ರಲ್ಲಿ ಬಿ.ಸಿ.ರಾಯ್ ಟ್ರೋಫಿ ಜೂನಿಯರ್ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಕಣಕ್ಕಿಳಿದಿದ್ದ ಅವರು, ಮರು ವರ್ಷ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

1979ರಲ್ಲಿ ಚೀನಾ ಪ್ರವಾಸಕ್ಕಾಗಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆಯಾದರೂ, ಕೆಲವು ಕಾರಣಗಳಿಂದಾಗಿ ಈ ಪ್ರವಾಸ ರದ್ದಾಗಿತ್ತು.

ADVERTISEMENT

ಎಚ್‌ಎಎಲ್‌ ಎಫ್‌ಸಿ, ಬಿನ್ನಿ ಎಫ್‌ಸಿ, ಎಜಿಒಆರ್‌ಸಿ ಮತ್ತು ಸಿಐಎಲ್‌ ಎಫ್‌ಸಿ ಕ್ಲಬ್ ತಂಡಗಳ ಪರವೂ ಉದಯ್‌ಕುಮಾರ್ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.