ADVERTISEMENT

ಫುಟ್‌ಬಾಲ್: ಶಂಕರ್‌ ನಾರಾಯಣ್‌ ಹ್ಯಾಟ್ರಿಕ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:46 IST
Last Updated 26 ಮಾರ್ಚ್ 2022, 19:46 IST

ಬೆಂಗಳೂರು: ಶಂಕರ್ ನಾರಾಯಣ್ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ವಿಜಯನಗರ ಎಫ್‌ಸಿ ತಂಡವು ಬಿಡಿಎಫ್‌ಎ ಸಿ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಶನಿವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿವಿಜಯನಗರ 8–0ಯಿಂದ ವಿವೇಕಾನಂದ ಎಫ್‌ಸಿ ತಂಡವನ್ನು ಸೋಲಿಸಿತು. ಶಂಕರ್‌ 23, 41 ಮತ್ತು 46ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಹರಿಹರನ್‌ (9, 38ನೇ ನಿ.) ಭೂಪತಿ ಕೆ. (10, 13ನೇ ನಿ.) ಕೂಡ ಮಿಂಚಿದರು. ಶಿವ ವೇಲನ್‌ (24ನೇ ನಿ.) ಒಂದು ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಕಾರ್ತಿಕ್‌ರಾಮ್ ಗಳಿಸಿದ ಮೂರು ಗೋಲುಗಳಿಂದ ಯಂಗ್‌ ಡೈನಮೊಸ್‌ ಎಫ್‌ಸಿ 7–0ಯಿಂದ ಬಸವನಗುಡಿ ಎದುರು ಗೆದ್ದಿತು. ‘ಐ’ ಗುಂಪಿನ ಪಂದ್ಯದಲ್ಲಿ ಸರ್ವಜ್ಞ ನಗರ ಎಫ್‌ಸಿ 4–2ರಿಮದ ಕ್ವೀನ್ಸ್ ಸ್ಟಾರ್‌ ವಿರುದ್ಧ ಜಯಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.