ಪುಣೆ (ಪಿಟಿಐ): ದಿಟ್ಟ ಆಟವಾಡಿದ ಕರ್ನಾಟಕದ ಮಿಥುನ್ ಮಂಜುನಾಥ್ ಅವರು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಇಲ್ಲಿ ನಡೆದ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಮಂಗಳವಾರ ಮಿಥುನ್ 21-16, 21-11ರಿಂದ ಮಧ್ಯಪ್ರದೇಶದ ಪ್ರಿಯಾಂಶು ರಾಜಾವತ್ ಅವರನ್ನು ಮಣಿಸಿದರು.
ಅಮೋಘ ಡಿಫೆನ್ಸ್ ಸಾಮರ್ಥ್ಯ, ಕಾರ್ಯತಂತ್ರ ಉಪಯೋಗಿಸಿದ ಮಿಥುನ್, ಕೇವಲ 38 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಹಿಂದೆ ಮಿಥುನ್ ಅವರು ಫ್ರಾನ್ಸ್ನಲ್ಲಿ ನಡೆದ ಆರ್ಲಿಯನ್ಸ್ ಮಾಸ್ಟರ್ಸ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅನುಪಮಾ ಉಪಾಧ್ಯಾಯ ಅವರು 20-22, 21-17, 24-22 ರಿಂದ ಆಕರ್ಷಿ ಕಶ್ಯಪ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಮಹಿಳಾ ಡಬಲ್ಸ್ನಲ್ಲಿ ಗಾಯತ್ರಿ ಗೋಪಿಚಂದ್– ತ್ರಿಶಾ ಜೋಲಿ 21-10, 21-9ರಿಂದ ಕಾವ್ಯಾ ಗುಪ್ತಾ– ದೀಪ್ಸಿಕಾ ಸಿಂಗ್ ವಿರುದ್ಧ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪುರುಷರ ಡಬಲ್ಸ್ನಲ್ಲಿ ಎಸ್. ಕುಶಾಲ್ ರಾಜ್– ಪ್ರಕಾಶ್ ರಾಜ್ ಮತ್ತು ಮಿಶ್ರ ಡಬಲ್ಸ್ನಲ್ಲಿ ಟಿ. ಹೇಮನಾಗೇಂದ್ರ ಬಾಬು–ಕನಿಕಾ ಕಿರೀಟ ಧರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.