ADVERTISEMENT

ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಜಯ

ರಾಜ್ಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 18:26 IST
Last Updated 8 ಜೂನ್ 2025, 18:26 IST
ವಿವೇಕ್ಸ್ ಎಸ್‌.ಸಿ ತಂಡದ ಆರೋಹಿ (ಎಡ) ಮತ್ತು ಮೌಂಟ್ಸ್ ತಂಡದ ಅನನ್ಯಾ (ಬಲ) ಚೆಂಡಿಗಾಗಿ ಸೆಣಸಾಟ ನಡೆಸಿದರು –ಪ್ರಜಾವಾಣಿ ಚಿತ್ರ:ಎಸ್‌.ಕೆ.ದಿನೇಶ್‌
ವಿವೇಕ್ಸ್ ಎಸ್‌.ಸಿ ತಂಡದ ಆರೋಹಿ (ಎಡ) ಮತ್ತು ಮೌಂಟ್ಸ್ ತಂಡದ ಅನನ್ಯಾ (ಬಲ) ಚೆಂಡಿಗಾಗಿ ಸೆಣಸಾಟ ನಡೆಸಿದರು –ಪ್ರಜಾವಾಣಿ ಚಿತ್ರ:ಎಸ್‌.ಕೆ.ದಿನೇಶ್‌   

ಬೆಂಗಳೂರು: ರೆಹಾನ್‌ ಖಾನ್‌ ಮತ್ತು ನೆಟ್ಲಾ ಚಂದ್ರ ಅವರ ಆಟದ ಬಲದಿಂದ ಚಿಕ್ಕಮಗಳೂರು ಜಿಲ್ಲಾ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 81–65ರಿಂದ ಹೂಪ್ಸ್‌ 7 ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ರೌಂಡ್‌ ರಾಬಿನ್‌ ಲೀಗ್‌ ಪಂದ್ಯದಲ್ಲಿ ವಿರಾಮದ ವೇಳೆಗೆ 6 ಅಂಕಗಳ (35–41) ಹಿನ್ನಡೆಯಲ್ಲಿದ್ದ ಚಿಕ್ಕಮಗಳೂರು ತಂಡವು ಉತ್ತರಾರ್ಧದಲ್ಲಿ ಪಾರಮ್ಯ ಮೆರೆದು ಗೆಲುವು ಸಾಧಿಸಿತು. ರೆಹಾನ್‌ ಮತ್ತು ಚಂದ್ರ ತಲಾ 23 ಅಂಕ ಗಳಿಸಿದರು. ಹೂಪ್ಸ್‌ ಪರ ಸಮರ್ಥ ಮಣೂರ್ ಮತ್ತು ದೇವ್‌ ರಾಘವೇಂದ್ರ ಕ್ರಮವಾಗಿ 20 ಮತ್ತು 19 ಪಾಯಿಂಟ್ಸ್‌ ಕಲೆ ಹಾಕಿದರು.

ಫಲಿತಾಂಶ: ರೌಂಡ್‌ ರಾಬಿನ್‌ ಲೀಗ್‌: ಬಾಲಕರು: ಎಚ್‌ಬಿಆರ್‌ ಬಿ.ಸಿ 67–62ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ವಿರುದ್ಧ; ಡಿವೈಇಎಸ್‌ ಬೆಂಗಳೂರು 74–39ರಿಂದ ಮೈಸೂರು ಜಿಲ್ಲೆ ಎ ವಿರುದ್ಧ; ಚಿಕ್ಕಮಗಳೂರು ಜಿಲ್ಲೆ 81–65 ಹೂಪ್ಸ್‌ 7 ಬಿ.ಸಿ ವಿರುದ್ಧ ಗೆಲುವು ಸಾಧಿಸಿತು. 

ADVERTISEMENT

ಬಾಲಕಿಯರು: ಮೌಂಟ್ಸ್‌ ಕ್ಲಬ್‌ 63–51ರಿಂದ ವಿವೇಕ್ಸ್‌ ಎಸ್‌.ಸಿ ಎದುರು; ಮೈಸೂರು ಜಿಲ್ಲೆ ಎ 61–46ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ಎದುರು ಜಯ ಸಾಧಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.