ADVERTISEMENT

ಬ್ಯಾಸ್ಕೆಟ್‌ಬಾಲ್: ಕೈಗಾ ಬಿ.ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 19:50 IST
Last Updated 30 ಜೂನ್ 2025, 19:50 IST
   

ಬೆಂಗಳೂರು: ಅರ್ಪಿತ್‌ ಹಾಗೂ ಅಭಿಜಿತ್ ಅವರ ಆಟದ ನೆರವಿನಿಂದ ಕೈಗಾ ಬಿ.ಸಿ ಕಾರವಾರ ತಂಡವು ಎಸ್‌.ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಸಿ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 63–44ರಿಂದ ದಾವಣಗೆರೆ ಜಿಲ್ಲಾ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಸೋಮವಾರ ನಡೆದ ಲೀಗ್‌ ಹಂತದ ಪಂದ್ಯದಲ್ಲಿ ವಿರಾಮದ ವೇಳೆ ಕೇವಲ ಒಂದು ಅಂಕ (30–29) ಮುನ್ನಡೆ ಪಡೆದಿದ್ದ ಕೈಗಾ ಬಿ.ಸಿ ತಂಡವು, ಉತ್ತರಾರ್ಧದಲ್ಲಿ ಪಾರಮ್ಯ ಸಾಧಿಸಿತು. ಕೈಗಾ ಬಿ.ಸಿ ಪರ ಅರ್ಪಿತ್‌ 24, ಅಭಿಜಿತ್‌ 10 ಅಂಕಗಳನ್ನು ಗಳಿಸಿದರು. ದಾವಣಗೆರೆ ತಂಡದ ಸಾತ್ವಿಕ್‌ 14 ಅಂಕ ಕಲೆಹಾಕಿದರು.

ಫಲಿತಾಂಶಗಳು: ಚಿಕ್ಕಮಗಳೂರು ಜಿಲ್ಲಾ ತಂಡವು 84–55ರಿಂದ ಕಲಬುರಗಿ ಜಿಲ್ಲೆ ವಿರುದ್ಧ; ಧಾರವಾಡ ಜಿಲ್ಲೆ ಬಿ ತಂಡವು 65–38ರಿಂದ ಬಳ್ಳಾರಿ ಜಿಲ್ಲೆ ವಿರುದ್ಧ ಹಾಗೂ ಕೈಗಾ ಬಿ.ಸಿ ಕಾರವಾರ ತಂಡವು 63–44ರಿಂದ ದಾವಣಗೆರೆ ಜಿಲ್ಲೆ ವಿರುದ್ಧ ಗೆಲುವು ಸಾಧಿಸಿದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.