ADVERTISEMENT

ದೇಹದಾರ್ಢ್ಯ ಸ್ಪರ್ಧೆ: ಸಂಜಯ್‌ ಸಿಂಗ್‌ ‘ಭಾರತ ಶ್ರೇಷ್ಠ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 16:10 IST
Last Updated 4 ಫೆಬ್ರುವರಿ 2020, 16:10 IST
ಭಾರತ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಸಂಜಯ್‌ ಸಿಂಗ್‌
ಭಾರತ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಸಂಜಯ್‌ ಸಿಂಗ್‌   

ಬೆಂಗಳೂರು: ಕರ್ನಾಟಕದ ಸಂಜಯ್‌ ಸಿಂಗ್‌ ಅವರು ಇಲ್ಲಿ ನಡೆದ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಭಾರತ ಶ್ರೇಷ್ಠ’ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಮೆಚೂರ್‌ ಬಾಡಿಬಿಲ್ಡರ್ಸ್‌ ಅಸೋಸಿಯೇಷನ್‌ ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಭಾರತ ಶ್ರೀ’ ಪ್ರಶಸ್ತಿಯೂ ಅವರಿಗೆ ಒಲಿಯಿತು.

‘ಭಾರತ ಶ್ರೇಷ್ಠ’ ರಾದ ಸಂಜಯ್‌ ಸಿಂಗ್‌ ₹ 1 ಲಕ್ಷ ನಗದು ಬಹುಮಾನ ಪಡೆದುಕೊಂಡರು. ಕರ್ನಾಟಕದವರಾದ ವೀರಭದ್ರ ಬಿ. ಎಸ್‌. ‘ಭಾರತ ಕಿಶೋರ’, ರವಿಕುಮಾರ್‌ ಡಿ. ‘ಮೆನ್‌ ಫಿಜಿಕ್‌’, ಅಶ್ವಿನಿ ತಂಬ್ರೆ ‘ವುಮೆನ್‌ ಫಿಜಿಕ್‌’ ಎನಿಸಿಕೊಂಡರು.

ಮಹಾರಾಷ್ಟ್ರದ ಪಟುಗಳಾದ ನಿತಿನ್‌ ಸಂಜೀವ್‌ ಶೆಟ್ಟಿ ‘ಭಾರತ ಉದಯ’, ಅಕ್ಷಯ್‌ ಶ್ರವಣ್‌ ಅವರು ‘ಭಾರತ ಕುಮಾರ’, ಶಾಶ್ವತ್‌ ಶಂಕರ್‌ ಮಂಕರ್‌ ‘ಭಾರತ ಕೇಸರಿ’, ನಿತಿನ್‌ ನಾಮದೇವ್‌ ಕೇಣಿ ‘ಫಿಟ್‌ನೆಸ್‌ ಮಾಡೆಲ್‌’ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.