ಮೈಸೂರು: ಕ್ರೀಡಾ ಭಾರತಿಯು ಜ.4ರಂದು ಬೆಳಿಗ್ಗೆ 8.30ಕ್ಕೆ ಇಲ್ಲಿನ ಕೋಟೆ ಆಂಜನೇಯ ದೇಗುಲದ ಎದುರು ಗಣ್ಯರ ಲಗೋರಿ ಆಟ ಆಯೋಜಿಸಿದ್ದು, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಸೇರಿದಂತೆ ಜನಪ್ರತಿನಿಧಿಗಳು, ವೈದ್ಯರು, ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ.
ಜ.19ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಕ್ರೀಡಾ ಸಮ್ಮೇಳನ ಆಯೋಜಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಲಗೋರಿ ಆಟ ಆಯೋಜಿಸಲಾಗಿದೆ. ಸಮ್ಮೇಳನದ ಸಭಾಕಾರ್ಯಕ್ರಮ ನಂತರ ಶಾಲಾ ಮಕ್ಕಳಿಗೆ ಓಟ, ವಾಲಿಬಾಲ್, ಕೊಕ್ಕೊ, ಬ್ಯಾಸ್ಕೆಟ್ಬಾಲ್, ಹಾಕಿ, ಲಗೋರಿ, ಹಗ್ಗಜಗ್ಗಾಟ, ಸ್ಕೂಲ್ ಬ್ಯಾಂಡ್, ಕುಸ್ತಿ ಸ್ಪರ್ಧೆಗಳು ನಡೆಯಲಿವೆ ಎಂದು ಕ್ರೀಡಾಭಾರತಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.