ನವದೆಹಲಿ (ಪಿಟಿಐ): ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲೆಲ್ಲಾ ಗೋಪಿಚಂದ್ ಅವರಿಗೆ ಕಾನ್ಪುರದ ಐಐಟಿಯು ಶುಕ್ರವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.
ಸಂಸ್ಥೆಯ 52ನೇ ಘಟಿಕೋತ್ಸವದಲ್ಲಿ ಇಸ್ರೊ ಮುಖ್ಯಸ್ಥ, ಐಐಟಿ ಕಾನ್ಪುರದ ಗವರ್ನರ್ಸ್ ಮಂಡಳಿಯ ಮೂಖ್ಯಸ್ಥರೂ ಆಗಿರುವ ಪ್ರೊ. ಕೆ. ರಾಧಾಕೃಷ್ಣನ್ ಅವರ ಪದವಿ ಪ್ರದಾನ ಮಾಡಿದರು.
ಒಲಿಂಪಿಯನ್ ಪದಕ ವಿಜೇತರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಸೇರಿದಂತೆ ಹಲವರು ಬ್ಯಾಡ್ಮಿಂಟನ್ ಪಟುಗಳಿಗೆ ಗೋಪಿಚಂದ್ ಅವರು ಮಾರ್ಗದರ್ಶನ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.