ADVERTISEMENT

ದ್ರೋಣಾಚಾರ್ಯ ಪ್ರಶಸ್ತಿಗೆ ರಮೇಶ್ ಅರ್ಜಿ

ಪಿಟಿಐ
Published 17 ಜೂನ್ 2020, 16:42 IST
Last Updated 17 ಜೂನ್ 2020, 16:42 IST
ರಮೇಶ್ ಪರಮೇಶ್ವರನ್
ರಮೇಶ್ ಪರಮೇಶ್ವರನ್   

ಬೆಂಗಳೂರು: ಭಾರತ ಹಾಕಿ ತಂಡದ ಮಾಜಿ ಸಹಾಯಕ ಕೋಚ್ ರಮೇಶ್ ಪರಮೇಶ್ವರನ್ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ.

ಹಾಕಿ ಇಂಡಿಯಾ ಈಗಾಗಲೇ ಬಿ.ಜೆ. ಕಾರಿಯಪ್ಪಮತ್ತು ರೊಮೇಶ್ ಪಠಾಣಿಯಾ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ. ಆದ್ದರಿಂದ ರಮೇಶ್ ಅವರು ಹಾಕಿ ಕರ್ನಾಟಕ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ.

‘ಜೂನಿಯರ್ ಹಂತದ ಆಟಗಾರನಾಗಿ ಬೆಳೆದು ರಾಷ್ಟ್ರೀಯ ತಂಡದ ಕೋಚ್‌ ಆಗಿ ಸೇವೆ ಸಲ್ಲಿಸಿದ ತೃಪ್ತಿಯಿದೆ. ನನ್ನ ಅನುಭವ, ವೃತ್ತಿಜೀವನದ ಏರಿಳಿತಗಳು, ಗೆಲುವು. ಸೋಲುಗಳನ್ನು ಸಮಗ್ರವಾಗಿ ಕಿರಿಯರೊಂದಿಗೆ ಹಂಚಿಕೊಂಡಿದ್ದೇನೆ. ನನ್ನ ಜೀವನದ ಬಹುಪಾಲು ಸಮಯ, ಧನ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದೇನೆ’ ಎಂದು ರಮೇಶ್ ಹೇಳಿದ್ದಾರೆ.

ADVERTISEMENT

ಅವರು 2015ರಿಂದ ಕರ್ನಾಟಕ ಹಾಕಿ ಅಕಾಡೆಮಿಯ ಪ್ರತಿಭಾಶೋಧದ ಹೊಣೆ ನಿಭಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.